<p><strong>ಹೊಸಪೇಟೆ(ವಿಜಯನಗರ): </strong>ಸ್ಥಳೀಯ ನಿವಾಸಿಗಳ ಅನುಕೂಲಕ್ಕಾಗಿ ಅಂಚೆ ಪೆಟ್ಟಿಗೆ ಅಳವಡಿಸುವಂತೆ ಸಂಕ್ಲಾಪುರ ಬಳಿಯ ವಿನಾಯಕ ನಗರದ ನಿವಾಸಿಗಳು ಆಗ್ರಹಿಸಿದ್ದಾರೆ.</p>.<p>ಈ ಸಂಬಂಧ ಅವರು ಇತ್ತೀಚೆಗೆ ಅಂಚೆ ಅಧಿಕಾರಿ ರಶೀದ್ ಸಾಬ್ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.</p>.<p>‘ನಗರದ ಹೊಲವಲಯದಲ್ಲಿರುವ ಸಂಕ್ಲಾಪುರದ ವಿನಾಯಕ ನಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸ್ಥಳೀಯ ನಿವಾಸಿಗಳು ಅಂಚೆ ಪತ್ರ ಸಲ್ಲಿಸಲು ವಿನಾಯಕ ನಗರದಿಂದ 2 ಕಿ.ಮೀ ದೂರದ ಜೆ.ಪಿ.ನಗರಕ್ಕೆ ಹೋಗಬೇಕಿದೆ. ವಿನಾಯಕ ನಗರದಲ್ಲಿ ಅಂಚೆ ಇಲಾಖೆಯಿಂದ ಅಂಚೆ ಪೆಟ್ಟಿಗೆ ಅಳವಡಿಸಿದರೆ ಸ್ಥಳೀಯರಿಗೆ ಅನುಕೂಲವಾಗುತ್ತದೆ’ ಎಂದು ತಿಳಿಸಿದ್ದಾರೆ.</p>.<p>ಮನವಿ ಸ್ವೀಕರಿಸಿದ ಅಂಚೆ ಅಧಿಕಾರಿ ರಶೀದ್ ಸಾಬ್, ‘ಅಂಚೆ ಪೆಟ್ಟಿಗೆ ಬೇಡವೆನ್ನುತ್ತಿರುವ ಕಾಲದಲ್ಲಿ ಅಂಚೆ ಪೆಟ್ಟಿಗೆಗಾಗಿ ಮನವಿ ಸಲ್ಲಿಸಿರುವುದು ಸಂತೋಷದ ವಿಷಯವಾಗಿದೆ. ಕೇವಲ ಪೆಟ್ಟಿಗೆ ಪಡೆದು ಸುಮ್ಮನಾಗದೇ ಸ್ಥಳೀಯ ನಿವಾಸಿಗಳು ಪತ್ರ ವ್ಯವಹಾರ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ.</p>.<p>ವಿನಾಯಕ ನಗರದ ನಿವಾಸಿಗಳಾದ ತಿಪ್ಪೇಸ್ವಾಮಿ, ಗೋಪಾಲ ಜೋಷಿ, ಜಂಬಣ್ಣ, ಈರೇಶ, ವೈ.ಯಮುನೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ(ವಿಜಯನಗರ): </strong>ಸ್ಥಳೀಯ ನಿವಾಸಿಗಳ ಅನುಕೂಲಕ್ಕಾಗಿ ಅಂಚೆ ಪೆಟ್ಟಿಗೆ ಅಳವಡಿಸುವಂತೆ ಸಂಕ್ಲಾಪುರ ಬಳಿಯ ವಿನಾಯಕ ನಗರದ ನಿವಾಸಿಗಳು ಆಗ್ರಹಿಸಿದ್ದಾರೆ.</p>.<p>ಈ ಸಂಬಂಧ ಅವರು ಇತ್ತೀಚೆಗೆ ಅಂಚೆ ಅಧಿಕಾರಿ ರಶೀದ್ ಸಾಬ್ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.</p>.<p>‘ನಗರದ ಹೊಲವಲಯದಲ್ಲಿರುವ ಸಂಕ್ಲಾಪುರದ ವಿನಾಯಕ ನಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸ್ಥಳೀಯ ನಿವಾಸಿಗಳು ಅಂಚೆ ಪತ್ರ ಸಲ್ಲಿಸಲು ವಿನಾಯಕ ನಗರದಿಂದ 2 ಕಿ.ಮೀ ದೂರದ ಜೆ.ಪಿ.ನಗರಕ್ಕೆ ಹೋಗಬೇಕಿದೆ. ವಿನಾಯಕ ನಗರದಲ್ಲಿ ಅಂಚೆ ಇಲಾಖೆಯಿಂದ ಅಂಚೆ ಪೆಟ್ಟಿಗೆ ಅಳವಡಿಸಿದರೆ ಸ್ಥಳೀಯರಿಗೆ ಅನುಕೂಲವಾಗುತ್ತದೆ’ ಎಂದು ತಿಳಿಸಿದ್ದಾರೆ.</p>.<p>ಮನವಿ ಸ್ವೀಕರಿಸಿದ ಅಂಚೆ ಅಧಿಕಾರಿ ರಶೀದ್ ಸಾಬ್, ‘ಅಂಚೆ ಪೆಟ್ಟಿಗೆ ಬೇಡವೆನ್ನುತ್ತಿರುವ ಕಾಲದಲ್ಲಿ ಅಂಚೆ ಪೆಟ್ಟಿಗೆಗಾಗಿ ಮನವಿ ಸಲ್ಲಿಸಿರುವುದು ಸಂತೋಷದ ವಿಷಯವಾಗಿದೆ. ಕೇವಲ ಪೆಟ್ಟಿಗೆ ಪಡೆದು ಸುಮ್ಮನಾಗದೇ ಸ್ಥಳೀಯ ನಿವಾಸಿಗಳು ಪತ್ರ ವ್ಯವಹಾರ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ.</p>.<p>ವಿನಾಯಕ ನಗರದ ನಿವಾಸಿಗಳಾದ ತಿಪ್ಪೇಸ್ವಾಮಿ, ಗೋಪಾಲ ಜೋಷಿ, ಜಂಬಣ್ಣ, ಈರೇಶ, ವೈ.ಯಮುನೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>