‘ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಅತಿಸೂಕ್ಷ್ಮ ಮತಗಟ್ಟೆಗಳ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠರು ಇ–ಮೇಲ್ ಮೂಲಕ ಜಿಲ್ಲಾಡಳಿತಕ್ಕೆ ರವಾನಿಸಿದ್ದರು. ಅದರ ಪ್ರಿಂಟೌಟ್ ತೆಗೆದಿದ್ದ ಪ್ರಥಮ ದರ್ಜೆ ಸಹಾಯಕ ಹರಿಕುಮಾರ್ ಅವರು ಪರಿಶೀಲನೆಗಾಗಿ ಮತ್ತು ಮೇಲಧಿಕಾರಿಗಳ ಸಹಿಗಾಗಿ ಶಿರಸ್ತೇದಾರ್ ಮನೋಜ್ ಲಾಡೆ ಅವರಿಗೆ ತಿಳಿಸಿ, ಅವರ ಮೇಜಿನ ಮೇಲೆ ಇರಿಸಿದ್ದರು. ಏಪ್ರಿಲ್ 15ರಂದು ಬೆಳಿಗ್ಗೆ 11.30ರ ವೇಳೆಗೆ ಕಚೇರಿಗೆ ಅತಿಕ್ರಮ ಪ್ರವೇಶ ಮಾಡಿದ ಬಿಜೆಪಿ ಕಾರ್ಯದರ್ಶಿ ಈ ದಾಖಲೆಯನ್ನು ಕಳವು ಮಾಡಿ, ಅದನ್ನು ತಮ್ಮ ಮೊಬೈಲ್ನಲ್ಲಿ ಪಿಡಿಎಫ್ ಮಾಡಿಕೊಂಡು ಪಕ್ಷದ ಇತರ ಕಾರ್ಯಕರ್ತರಿಗೆ ರವಾನಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.