‘ಹುಬ್ಬಳ್ಳಿ–ಬಳ್ಳಾರಿ ನಡುವೆ ನಿತ್ಯ ಸಂಚರಿಸುವ ಈ ಪ್ರಯಾಣಿಕ ರೈಲಿನ ಮೂಲಕ ಹೊಸಪೇಟೆ, ಕೊಪ್ಪಳ ಹಾಗೂ ಗದಗದಿಂದ ದಿನನಿತ್ಯ ನೂರಾರು ಜನ ಸಂಚರಿಸುತ್ತಾರೆ. ಒಂದು ರೀತಿಯಲ್ಲಿ ಈ ಭಾಗದ ಪ್ರಯಾಣಿಕರ ಲೈಫ್ಲೈನ್ ಆಗಿದೆ. ಹೆಚ್ಚುವರಿ ಬೋಗಿಗಳನ್ನು ಅಳವಡಿಸುವಂತೆ ಹಲವು ವರ್ಷಗಳಿಂದ ಒತ್ತಾಯಿಸುತ್ತ ಬರಲಾಗಿತ್ತು’ ಎಂದುವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಕೆ. ಮಹೇಶ್ ತಿಳಿಸಿದ್ದಾರೆ.