<p><strong>ಹೊಸಪೇಟೆ (ವಿಜಯನಗರ</strong>): ಹುಬ್ಬಳ್ಳಿ–ಬಳ್ಳಾರಿ–ಹುಬ್ಬಳ್ಳಿ (ಗಾಡಿ ಸಂಖ್ಯೆ 07337/07338) ಪ್ರಯಾಣಿಕ ರೈಲಿಗೆ ಐದು ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ನೈರುತ್ಯ ರೈಲ್ವೆ ವಲಯ ತೀರ್ಮಾನಿಸಿದೆ.</p>.<p>ಈಗಿರುವ ರೈಲು ಗಾಡಿಗೆ ಎಂಟು ಬೋಗಿಗಳಿವೆ. ಐದು ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದ ನಂತರ ಅವುಗಳ ಸಂಖ್ಯೆ 13ಕ್ಕೆ ಏರಲಿದೆ. ಬುಧವಾರದಿಂದ (ಆ.4) ಜಾರಿಗೆ ಬರುವಂತೆ ರೈಲಿಗೆ ಬೋಗಿಗಳನ್ನು ಅಳವಡಿಸಲಾಗುತ್ತದೆ.</p>.<p>‘ಹುಬ್ಬಳ್ಳಿ–ಬಳ್ಳಾರಿ ನಡುವೆ ನಿತ್ಯ ಸಂಚರಿಸುವ ಈ ಪ್ರಯಾಣಿಕ ರೈಲಿನ ಮೂಲಕ ಹೊಸಪೇಟೆ, ಕೊಪ್ಪಳ ಹಾಗೂ ಗದಗದಿಂದ ದಿನನಿತ್ಯ ನೂರಾರು ಜನ ಸಂಚರಿಸುತ್ತಾರೆ. ಒಂದು ರೀತಿಯಲ್ಲಿ ಈ ಭಾಗದ ಪ್ರಯಾಣಿಕರ ಲೈಫ್ಲೈನ್ ಆಗಿದೆ. ಹೆಚ್ಚುವರಿ ಬೋಗಿಗಳನ್ನು ಅಳವಡಿಸುವಂತೆ ಹಲವು ವರ್ಷಗಳಿಂದ ಒತ್ತಾಯಿಸುತ್ತ ಬರಲಾಗಿತ್ತು’ ಎಂದುವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಕೆ. ಮಹೇಶ್ ತಿಳಿಸಿದ್ದಾರೆ.</p>.<p>‘ರೈಲ್ವೆ ಸಲಹಾ ಸಮಿತಿ ಸದಸ್ಯ ಬಾಬುಲಾಲ್ ಜೈನ್ ಕೂಡ ಸಾಕಷ್ಟು ಶ್ರಮಿಸಿದ್ದಾರೆ. ಒಟ್ಟಿನಲ್ಲಿ ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಿರುವ ರೈಲ್ವೆ ಇಲಾಖೆಯ ಕ್ರಮ ಸ್ವಾಗತಾರ್ಹವಾದುದು. ಕೋವಿಡ್ ಸಂದರ್ಭದಲ್ಲಿ ಜನ ಅಂತರ ಕಾಪಾಡಿಕೊಂಡು ಸಂಚರಿಸಲು ಸಹಾಯವಾಗಲಿದೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ</strong>): ಹುಬ್ಬಳ್ಳಿ–ಬಳ್ಳಾರಿ–ಹುಬ್ಬಳ್ಳಿ (ಗಾಡಿ ಸಂಖ್ಯೆ 07337/07338) ಪ್ರಯಾಣಿಕ ರೈಲಿಗೆ ಐದು ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ನೈರುತ್ಯ ರೈಲ್ವೆ ವಲಯ ತೀರ್ಮಾನಿಸಿದೆ.</p>.<p>ಈಗಿರುವ ರೈಲು ಗಾಡಿಗೆ ಎಂಟು ಬೋಗಿಗಳಿವೆ. ಐದು ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದ ನಂತರ ಅವುಗಳ ಸಂಖ್ಯೆ 13ಕ್ಕೆ ಏರಲಿದೆ. ಬುಧವಾರದಿಂದ (ಆ.4) ಜಾರಿಗೆ ಬರುವಂತೆ ರೈಲಿಗೆ ಬೋಗಿಗಳನ್ನು ಅಳವಡಿಸಲಾಗುತ್ತದೆ.</p>.<p>‘ಹುಬ್ಬಳ್ಳಿ–ಬಳ್ಳಾರಿ ನಡುವೆ ನಿತ್ಯ ಸಂಚರಿಸುವ ಈ ಪ್ರಯಾಣಿಕ ರೈಲಿನ ಮೂಲಕ ಹೊಸಪೇಟೆ, ಕೊಪ್ಪಳ ಹಾಗೂ ಗದಗದಿಂದ ದಿನನಿತ್ಯ ನೂರಾರು ಜನ ಸಂಚರಿಸುತ್ತಾರೆ. ಒಂದು ರೀತಿಯಲ್ಲಿ ಈ ಭಾಗದ ಪ್ರಯಾಣಿಕರ ಲೈಫ್ಲೈನ್ ಆಗಿದೆ. ಹೆಚ್ಚುವರಿ ಬೋಗಿಗಳನ್ನು ಅಳವಡಿಸುವಂತೆ ಹಲವು ವರ್ಷಗಳಿಂದ ಒತ್ತಾಯಿಸುತ್ತ ಬರಲಾಗಿತ್ತು’ ಎಂದುವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಕೆ. ಮಹೇಶ್ ತಿಳಿಸಿದ್ದಾರೆ.</p>.<p>‘ರೈಲ್ವೆ ಸಲಹಾ ಸಮಿತಿ ಸದಸ್ಯ ಬಾಬುಲಾಲ್ ಜೈನ್ ಕೂಡ ಸಾಕಷ್ಟು ಶ್ರಮಿಸಿದ್ದಾರೆ. ಒಟ್ಟಿನಲ್ಲಿ ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಿರುವ ರೈಲ್ವೆ ಇಲಾಖೆಯ ಕ್ರಮ ಸ್ವಾಗತಾರ್ಹವಾದುದು. ಕೋವಿಡ್ ಸಂದರ್ಭದಲ್ಲಿ ಜನ ಅಂತರ ಕಾಪಾಡಿಕೊಂಡು ಸಂಚರಿಸಲು ಸಹಾಯವಾಗಲಿದೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>