ಹಂಪಿಯಲ್ಲಿ ಅಪಾರ ಸಂಖ್ಯೆಯ ಮಂಗ, ಬಿಡಾಡಿ ದನ, ಬೀದಿ ನಾಯಿಗಳಿವೆ. ಸದಾ ಜನರಿಂದ ಗಿಜಿಗುಡುವ ವಿರೂಪಾಕ್ಷೇಶ್ವರ ದೇವಸ್ಥಾನ, ರಥಬೀದಿಯಲ್ಲಿ ಭಕ್ತರು, ವ್ಯಾಪಾರಿಗಳು ಕೊಡುವ ಬಾಳೆಹಣ್ಣು, ಕೊಬ್ಬರಿ, ಬಿಸ್ಕತ್ ತಿಂದು ಓಡಾಡುತ್ತವೆ. ಈಗ ಸ್ಮಾರಕ, ದೇವಸ್ಥಾನದ ಬಾಗಿಲು ಮುಚ್ಚಿರುವುದರಿಂದ ಅವುಗಳಿಗೆ ಆಹಾರ ಸಿಗದಂತಾಗಿದೆ.