ಹರಪನಹಳ್ಳಿ ಪಟ್ಟಣದ ಗೋಸಾಮಿ ಗುಡ್ಡದ ಹಿಂಭಾಗದಲ್ಲಿ ಹಾಲವರ್ತಿ ಬಳಿಯಿರುವ ಹಾಲವರ್ತಿ ಮಠ.
ತಪೋ ಪವಾಡ ಭೂಮಿ
ಹಾಲವರ್ತಿ ವಿಶಿಷ್ಟ ಜಾಗೃತ ಸ್ಥಳವಾಗಿದ್ದು ಮಹಾಶಿವಯೋಗಿಗಳ ತಪೋಭೂಮಿಯಾಗಿದೆ. ಲಿಂಗೈಕ್ಯ ಚನ್ನವೀರೇಶ್ವರ ಶರಣರು ಹರಪನಹಳ್ಲಿ ಕಲ್ಲಹಳ್ಳಿ ಅರಸನಾಳು ಹೆಸರಿನಲ್ಲಿ ದೇವಸ್ಥಾನವಿದ್ದು ಹ್ಯಾರಡ ಹರವಿ ಬಲ್ಲಾಹುಣಸಿ ಮೈಲಾರ ಹಿರೇಹಡಗಲಿಗಳಿಗೆ ಸಂಚಾರ ಮಾಡಿ ಕೊನೆಗೆ ಈಗಿನ ಲಿಂಗನಾಯಕನಹಳ್ಳಿಯಲ್ಲಿ ನೆಲೆಸಿರುವುದು ತಿಳಿದುಬರುತ್ತದೆ. ಹಾಲವರ್ತಿ ಸುತ್ತಲೂ ಗುಡ್ಡವಿದ್ದು ಅಹ್ಲಾದಕರ ವಾತಾವರಣ ಹೊಂದಿದೆ ಎಂದು ರಾಜಶೇಖರ ಬಣಕಾರ್ ತಿಳಿಸಿದರು. ಕಲ್ಲಹಳ್ಳಿಯ ಬಿಲ್ವವೃಕ್ಷದಲ್ಲಿ ನಡೆದ ಪವಾಡ ಹರವಿಯಲ್ಲಿ ಶಿವಯೋಗಿಗೆ ಆಕಳು ಹಾಲುಣಿಸಿದ್ದು ಲಿಂಗನಾಯಕನಹಳ್ಳಿಯಲ್ಲಿ ವಟುವಿನ ಮೇಲೆ ಎರಗಿದ್ದ ಹುಲಿಯನ್ನು ತಮ್ಮ ತಪಸ್ಸು ಶಕ್ತಿಯಿಂದ ತಡೆದಿರುವ ಕಥೆಗಳು ಜನರ ಬಾಯಲ್ಲಿ ಹರಿದಾಡುತ್ತಿವೆ.