ಹೊಸಪೇಟೆ(ವಿಜಯನಗರ): ಲಾಕ್ಡೌನ್ನಿಂದ ಸಮಸ್ಯೆ ಅನುಭವಿಸುತ್ತಿರುವ ನೂರು ಜನ ಅರ್ಚಕರಿಗೆ ಉದ್ಯಮಿ ಕಿಶೋರ್ ಪತ್ತಿಕೊಂಡ ಅವರು ಮಂಗಳವಾರ ಆಹಾರದ ಕಿಟ್ ವಿತರಿಸಿದರು.
10 ಕೆ.ಜಿ ಅಕ್ಕಿ, 1 ಕೆ.ಜಿ. ತೊಗರಿ ಬೆಳೆ, 1 ಕೆ.ಜಿ. ರವೆ, 1 ಲೀಟರ್ ಅಡುಗೆ ಎಣ್ಣೆ ಸೇರಿದಂತೆ ಇತರೆ ಸಾಮಗ್ರಿಗಳನ್ನು ಒಳಗೊಂಡ ಒಟ್ಟು ₹1,250 ಮೌಲ್ಯದ ನೂರು ಆಹಾರ ಕಿಟ್ಗಳನ್ನು ವಿತರಿಸಿದರು. ಡಿವೈಎಸ್ಪಿ ವಿ. ರಘುಕುಮಾರ ಅವರು ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು.
‘ಅರ್ಚಕ ಕುಟುಂಬಗಳಿಗೆ ರೇಷನ್ ಕಾರ್ಡ್ ಇರೋದಿಲ್ಲ. ರೇಷನ್ ಕಾರ್ಡ್ ಇರೋರಿಗೆ ರೇಷನ್ ಸಿಗುತ್ತದೆ. ಆದರೆ, ಈ ಕುಟುಂಬಗಳಿಗೆ ಯಾರೂ ಸಹಾಯ ಮಾಡೊಲ್ಲ. ಅವರಿಗೆ ನೆರವಾಗಲು ಆಹಾರದ ಕಿಟ್ ವಿತರಿಸಲಾಗುತ್ತಿದೆ’ ಎಂದು ಕಿಶೋರ್ ಪತ್ತಿಕೊಂಡ ಹೇಳಿದರು.
ಪೊಲೀಸ್ ಇನ್ಸ್ಪೆಕ್ಟರ್ಗಳಾದ ಶ್ರೀನಿವಾಸ್, ಮಹಾಂತೇಶ್ ಸಜ್ಜನ್, ಶ್ರೀನಿವಾಸ್ ಮೇಟಿ, ಜಯಪ್ರಕಾಶ್ ಇದ್ದರು.