ಹೊಸಪೇಟೆ (ವಿಜಯನಗರ): ಚಿರತೆ ದಾಳಿಗೆ ಕುದುರೆ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಿಗ್ಗೆ ತಾಲ್ಲೂಕಿನ ಹಂಪಿ ವಿಜಯ ವಿಠಲ ಬಜಾರ್ ಬಳಿ ನಡೆದಿದೆ.
ದಿನಂತೆ ಕುದುರೆ ವಿಹರಿಸುತ್ತಿತ್ತು. ಈ ವೇಳೆ ಚಿರತೆ ಏಕಾಏಕಿ ಎರಗಿ ಕುದುರೆ ಕತ್ತಿನ ಭಾಗದ ಮೇಲೆ ದಾಳಿ ನಡೆಸಿದ್ದರಿಂದ ಸ್ಥಳದಲ್ಲೇ ಜೀವ ಬಿಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಜಯ ವಿಠಲ ದೇವಸ್ಥಾನ ಸಂರಕ್ಷಿತ ಸ್ಮಾರಕವಾಗಿದ್ದು, ಈ ಸ್ಮಾರಕ ಕಣ್ತುಂಬಿಕೊಳ್ಳಲು ನಿತ್ಯ ನೂರಾರು ಜನ ಪ್ರವಾಸಿಗರು ಭೇಟಿ ಕೊಡುತ್ತಾರೆ. ಚಿರತೆ ದಾಳಿ ಆತಂಕಕ್ಕೆ ಕಾರಣವಾಗಿದೆ.