ಹೊಸಪೇಟೆ (ವಿಜಯನಗರ): ‘ಗಾಣಿಗ ಸಮುದಾಯವು ಆರ್ಥಿಕ ಏಳಿಗೆಯೊಂದಿಗೆ ಒಗ್ಗಟ್ಟು ಕೂಡ ಬರಬೇಕು’ ಎಂದು ಬಿಜೆಪಿ ಮುಖಂಡ ಲಕ್ಷ್ಮಣ ಸವದಿ ತಿಳಿಸಿದರು.
ನಗರದ ವಡಕರಾಯ ದೇವಸ್ಥಾನದ ಬಳಿ ಭಾನುವಾರ ನೂತನವಾಗಿ ಸ್ಥಾಪಿಸಿದ ಜ್ಯೋತಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಏಳಿಗೆಯನ್ನು ಹೊಂದುವ ಕಾರಣದಿಂದಲೇ ಸಂಘವನ್ನು ಹುಟ್ಟುಹಾಕಿದ್ದೀರಿ. ಅದರ ಜೊತೆಗೆ ಸಮಾಜದ ಮಧ್ಯಮ ವರ್ಗದ ಜನರ ಅನುಕೂಲಕ್ಕಾಗಿ ಸ್ಥಾಪಿಸಿದ ಸಹಕಾರಿ ಸಂಘವನ್ನು ಯಶಸ್ವಿಯಾಗಿ ಮುನ್ನೆಡೆಸುವುದರ ಜೊತೆಗೆ ಸಮುದಾಯವನ್ನು ಏಳಿಗೆಯತ್ತ ಕೊಂಡೊಯ್ಯಬೇಕು ಎಂದು ಕಿವಿಮಾತು ಹೇಳಿದರು.
ಸಹಕಾರ ಸಂಘದ ಸಂಸ್ಥಾಪಕ ಮಲ್ಲಿಕಾರ್ಜುನ ಕುರಡಗಿ ಮಾತನಾಡಿ, ಸಮುದಾಯದ ಜೊತೆಗೆ ಸಾಮಾಜಿಕ ಬದ್ಧತೆಗಾಗಿ ಸಂಘ ಸ್ಥಾಪಿಸಲಾಗಿದೆ. ಸಮುದಾಯದ ಜನರು ಸಹಕಾರ ಸಂಘದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗಾಣಿಗ ಗುರುಪೀಠದ ಜಯಬಸವ ಕುಮಾರ ಸ್ವಾಮೀಜಿ, ಮುರುಘರಾಜೇಂದ್ರ ಮಠದ ಶಿವಮೂರ್ತಿ ಸ್ವಾಮೀಜಿ, ನಿವೃತ್ತ ಸಹಾಯಕ ನಿಬಂಧಕ ಲಿಯಾಕತ್ ಅಲಿ, ಗಾಣಿಗ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಸಿದ್ಧಪ್ಪ ಇದ್ದರು.