ಕೋವಿಡ್ ಲಾಕ್ಡೌನ್ನಿಂದ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಪಾಠ ಹೇಳಿಕೊಡಲಾಗಿದೆ. ಆದರೆ, ರೈತರು, ದಲಿತರು, ಹಿಂದುಳಿದ ವರ್ಗದ ಮಕ್ಕಳು, ಗುಡ್ಡಗಾಡು ಪ್ರದೇಶದವರ ಮಕ್ಕಳು ಅದರಿಂದ ವಂಚಿತರಾಗಿದ್ದಾರೆ. ಇನ್ನಷ್ಟೇ ಅವರು ಮುಖ್ಯ ವಾಹಿನಿಗೆ ಬರಬೇಕು. ಡಿಜಿಟಲ್ ಶಿಕ್ಷಣ ಇನ್ನೂ ಅವರಿಗೆ ದೂರದ ಮಾತು. ಹಾಗಾಗಿ ಒಂದುವೇಳೆ ಈ ವರ್ಗದ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿ, ಅವರ ಎಂಟನೇ ಅಥವಾ ಒಂಬತ್ತನೇ ತರಗತಿಯ ಅಂಕಗಳನ್ನು ಆಧರಿಸಿ ಅವರಿಗೆ ಅಂಕ ಕೊಡಬೇಕು ಎಂದು ಆಗ್ರಹಿಸಿದರು.