‘ಸ್ಮಶಾನವಿಲ್ಲದ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಜಾಗ ಗುರುತಿಸಿ, ಸ್ಮಶಾನಕ್ಕೆ ಮೂಲಸೌಕರ್ಯ ಒದಗಿಸಬೇಕು ಎನ್ನುವ ನಿಯಮವಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಂಡ, ಹಟ್ಟಿ, ಕೇರಿಗಳಲ್ಲಿ ಈ ನಿಮಯ ಕಾರ್ಯಗತವಾಗಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸ್ಮಶಾನಕ್ಕೆ ಭೂಮಿ ಒದಗಿಸಬೇಕು’ ಎಂದು ಶಾಂತಿನಗರದ ವಕೀಲ ಅನಂತ ನಾಯ್ಕ ಒತ್ತಾಯಿಸಿದರು.