ಸತತ ಇಪ್ಪತ್ತು ವರ್ಷಗಳಿಂದ ನಗರಕ್ಕೆ ಬರುತ್ತಿರುವ ಇವರು, ಗಣೇಶ ಚತುರ್ಥಿಗೂ ಮುನ್ನ ನಗರಕ್ಕೆ ಬಂದು ಗಣಪನ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡಿ ಊರಿಗೆ ವಾಪಸಾಗುತ್ತಾರೆ. ಲಾಕ್ಡೌನ್ನಿಂದ ಹೋದ ವರ್ಷ ಕೋಲ್ಕತ್ತದಲ್ಲಿ ಹೇಳಿಕೊಳ್ಳುವಂತಹ ಕೆಲಸ ಸಿಗಲಿಲ್ಲ. ಹೀಗಾಗಿ ಮುಂಚಿತವಾಗಿಯೇ ಕೆಲಸ ಆರಂಭಿಸಿ, ನಷ್ಟ ಸರಿದೂಗಿಸಿಕೊಳ್ಳಬೇಕೆಂಬ ಯೋಚನೆಯಿಂದ ಮೂರು ತಿಂಗಳ ಹಿಂದೆಯೇ ಇಲ್ಲಿಗೆ ಬಂದಿದ್ದಾರೆ. ಆದರೆ, ಇದೀಗ ಇಲ್ಲೂ ಲಾಕ್ಡೌನ್ ಇರುವುದರಿಂದ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.