‘ರಸ್ತೆಯಲ್ಲೂ ಕಸ, ನಿವೇಶನದಲ್ಲೂ ಕಸ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಗುರುವಾರ (ಮಾ. 24) ವರದಿ ಪ್ರಕಟಿಸಿತ್ತು. ವರದಿ ನೋಡಿ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಆರತಿ ಅವರು, ಪರಿಶೀಲನೆ ನಡೆಸಿದರು. ರಸ್ತೆಯ ತುಂಬೆಲ್ಲ ತ್ಯಾಜ್ಯ ಹರಡಿ, ಜನಸಾಮಾನ್ಯರ ಓಡಾಟಕ್ಕೆ ತೊಂದರೆ ಆಗುತ್ತಿರುವುದನ್ನು ಮನಗಂಡು, ಸ್ಥಳಕ್ಕೆ ಸಿಬ್ಬಂದಿ ಕರೆಸಿಕೊಂಡು, ಜೆಸಿಬಿ ಸಹಾಯದಿಂದ ತ್ಯಾಜ್ಯ ತೆರವುಗೊಳಿಸಿ, ಸ್ಥಳಾಂತರಿಸಿದರು.