ಪಿ. ಶಾಮ್ರಾಜ್ (18) ಮೃತ ವಿದ್ಯಾರ್ಥಿ. ‘ಸಂಡೂರಿನ ಶ್ರೀಶೈಲ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಶಾಮ್ರಾಜ್ ಪರೀಕ್ಷೆ ಬರೆದಿದ್ದ. ಬೆಳಿಗ್ಗೆ ಕುಟುಂಬ ಸದಸ್ಯರೊಡನೆ ಹೊಲಕ್ಕೆ ಬಿತ್ತನೆಗೆ ಹೋಗಿದ್ದ. ಮಧ್ಯಾಹ್ನ ಆನ್ಲೈನ್ನಲ್ಲಿ ಫಲಿತಾಂಶ ನೋಡಿದ್ದಾನೆ. ಗಣಿತ ವಿಷಯದಲ್ಲಿ ಫೇಲಾಗಿದ್ದು ತಿಳಿದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಜೀವ ತ್ಯಜಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.