ಪುರಂದರ ದಾಸರ ಮೂರ್ತಿಗೆ ಫಲಪಂಚಾಮೃತಾಭಿಷೇಕ, ವಸ್ತ್ರ ಅಲಂಕಾರ, ಹೂಗಳ ಅಲಂಕಾರ, ಅರ್ಚನೆ, ಶ್ರೀರಾಯರ ಅಷ್ಟೋತ್ತರ ಪಾರಾಯಣ, ನೇವೈದ್ಯ, ಮಹಾಮಂಗಳಾರತಿ, ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಸಂಜೆ ಸ್ವಸ್ತಿವಾಚನ, ಶ್ರೇಯಪ್ರಾರ್ಥನೆ, ಭಜನೆ ಕಾರ್ಯಕ್ರಮ ನಡೆಯಿತು.
ಪುರಂದರದಾಸರ ಭಾವಚಿತ್ರದೊಂದಿಗೆ ವಿಜಯ ವಿಠಲ ದೇವಸ್ಥಾನದ ಸಮೀಪದಿಂದ ಶ್ರೀಪುರಂದರ ದಾಸರ ಮಂಟಪದವರೆಗೆ ಭಜನಾ ಮಂಡಳಿ ಸದಸ್ಯರು ಸಂಕೀರ್ತನೆ ನಡೆಸಿದರು. ದಾಸವಾಣಿ, ಗೀತಗಾಯನ, ಸಾಮೂಹಿಕ ಭಜನೆ, ಶ್ರೀಪುರಂದರ ದಾಸರ ಸಾಹಿತ್ಯ ಕುರಿತು ಉಪನ್ಯಾಸ ನಡೆಯಿತು.