ಶನಿವಾರ ಹಗಲು–ರಾತ್ರಿ ಎಡೆಬಿಡದೆ ಮಳೆಯಾಗಿತ್ತು. ಭಾನುವಾರವೂ ಮುಂದುವರೆಯಿತು. ಕೆಲವೊಮ್ಮೆ ಬಿರುಸು, ಕೆಲವೊಮ್ಮೆ ತುಂತುರು, ಜಿಟಿಜಿಟಿ ಮಳೆಯಾಯಿತು. ಮೇಲಿಂದ ತಂಗಾಳಿ ಕೂಡ ಬೀಸುತ್ತಿತ್ತು. ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರಿನಲ್ಲಿ ಸಾಧಾರಣ ಮಳೆಯಾದರೆ, ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ಸುತ್ತಮುತ್ತ ಬಿರುಸಿನ ಮಳೆಯಾಗಿ ಒಂಬತ್ತು ಮೇಕೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮನೆಗಳಿಗೆ ನೀರು ನುಗ್ಗಿದೆ. ಗದ್ದೆಗೆ ನೀರು ನುಗ್ಗಿದೆ. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೆರೆ, ಕಟ್ಟೆ, ಚೆಕ್ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ.