ಹೊಸಪೇಟೆ (ವಿಜಯನಗರ): ನಗರದ ಚಿತ್ತವಾಡ್ಗಿ ವರಕೇರಿ ಪ್ರದೇಶದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸದ್ಗುರು ಎಣ್ಣೇರಂಗ ಬಸವೇಶ್ವರ ದೇವಸ್ಥಾನದ ಹರಗಿಣಡೊಣಿ ಬಸಪ್ಪ ತಾತನವರ ರಥೋತ್ಸವ ಶನಿವಾರ ಸಂಜೆ ಜರುಗಿತು.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಸುತ್ತಮುತ್ತಲಿನ ಹಳ್ಳಿಗಳ ಜನರ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಹೂವಿನ ರಥೋತ್ಸವ ದೇವಸ್ಥಾನದಿಂದ ಸಂಜೆ ಹೊರಟು ಐ.ಎಸ್.ಆರ್ ಮುಖ್ಯ ರಸ್ತೆಯಲ್ಲಿನ ಬನ್ನಿಮಹಾಂಕಾಳಿ ದೇವಸ್ಥಾನಕ್ಕೆ ತೆರಳಿ ಪುನಃ ದೇವಸ್ಥಾನದ ಆವರಣಕ್ಕೆ ಬಂದಿತು.
ಯುವಕರಿಂದ ಕೋಲಾಟ, ಡೊಳ್ಳು ಕುಣಿತ, ಭಜನೆ, ಹಲಗೆ ವಾದನ ನಡೆಯಿತು. ದೇವಸ್ಥಾನ ಆಡಳಿತ ಮಂಡಳಿಯ ಹೊನ್ನೂರಪ್ಪ, ಡಿ.ಈಶ್ವರಪ್ಪ, ಕಾಶಿನಾಥಪ್ಪ, ಎ.ಬಸವರಾಜ, ನಿಂಬಗಲ್ ರಾಮಕೃಷ್ಣ, ದಾನಪ್ಪ, ಹೊಸೂರಪ್ಪ, ಕಳವಳ್ಳಿ ಹೊನ್ನೂರಪ್ಪ, ಕೆ.ಎಲ್.ಆಚಾರಿ, ಗೋನಾಳ ಹುಲುಗಪ್ಪ ಇದ್ದರು.