ವಿರೂಪಾಕ್ಷನ ಮುಂಭಾಗ ನಂದಿಗೆ ಅಡ್ಡಲಾಗಿ ಕಾಣಿಕೆ ಹುಂಡಿಯನ್ನು ಇಡುವುದಕ್ಕೆ ಕೆಲವು ಭಕ್ತರಿಂದ ಹಾಗೂ ಅರ್ಚಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ನಂದಿಯ ಭುಜಗಳಿಂದ ಶಿವನನ್ನು ನೋಡುವುದಕ್ಕೆ ಅಡ್ಡಿ ಉಂಟಾಗುತ್ತದೆ ಎಂಬುದು ಆಕ್ಷೇಪದ ಮೂಲವಾಗಿತ್ತು. ಆದರೆ ಇಲಾಖೆಯ ಸಚಿವರು, ಜಿಲ್ಲಾಡಳಿತದ ಕಟ್ಟುನಿಟ್ಟಿನ ಸೂಚನೆ ಇದ್ದ ಕಾರಣ ಯಾವ ಒತ್ತಡಕ್ಕೂ ಮಣಿಯದ ಆಡಳಿತಾಧಿಕಾರಿ ಅವರು ಹುಂಡಿಯನ್ನು ಅಲ್ಲಿಂದ ತೆರವು ಮಾಡದೆ ಅಲ್ಲೇ ಇರಿಸಿದ್ದರು. ಶಿವನಿಗೆ ಸಲ್ಲುವ ಪ್ರಧಾನ ಅಭಿಷೇಕದದ ಸಮಯ ಹಾಗೂ ಮಹಾಮಂಗಳಾರತಿ ವೇಳೆ ಹುಂಡಿಯನ್ನು ಬದಿಗೆ ಸರಿಸಿ ಭಕ್ತರ ಭಾವನೆಯನ್ನು ಪುರಸ್ಕರಿಸಲಾಗುತ್ತಿದೆ.