<p><strong>ಹೊಸಪೇಟೆ (ವಿಜಯನಗರ):</strong> ತಾಲ್ಲೂಕು ಸಹಿತ ಜಿಲ್ಲೆಯ ವಿವಿಧೆಡೆ ಮಣ್ಣೆತ್ತಿನ ಅಮಾವಾಸ್ಯೆಯ ನಂತರದ ಮೊದಲ ಮಂಗಳವಾರ ಬಂಜಾರ (ಲಂಬಾಣಿ) ಸಮುದಾಯದವರು ಸೀತ್ಲಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.</p>.<p>ರೋಗ-ರುಜಿನಗಳು ದೂರವಾಗಲಿ, ಧನ-ಧಾನ್ಯ ಸಮೃದ್ಧಿಯಾಗಿ ಬೆಳೆದು ಸುಖ, ಶಾಂತಿ ನೆಮ್ಮದಿಯ ಬದುಕು ನಮ್ಮದಾಗಲಿ ಎಂದು ಪ್ರಾರ್ಥಿಸಿ ತುಳಜಾ ಭವಾನಿ, ಈಂಗಳ ಭವಾನಿ, ಮರಿಯಾ ಭವಾನಿ, ಮತ್ರೋಡಿ ಭವಾನಿ, ದೋಳಂಗಲ್ ಭವಾನಿ ಹಾಗೂ ಕೀಲಕಂಟಕ ಭವಾನಿ ದೇವತೆಗಳನ್ನು ಊರ ಹೊರಗೆ ಬೇವಿನಮರದ ಬುಡದಲ್ಲಿ ಪೂಜಿಸುವುದೇ ಈ ಆಚರಣೆಯ ಪ್ರಮುಖ ಅಂಶವಾಗಿದೆ.</p>.<p>ಸಮುದಾಯದವರು ಭಕ್ತಿ ಭಾವದಿಂದ ಏಳು ಮಾತೆಯರನ್ನು ಪ್ರತಿಬಿಂಬಿಸುವ ದೇವತೆಗಳನ್ನು ಪ್ರತಿಷ್ಠಾಪಿಸಿದರು. ಮರದ ಏಳು ಕೊಂಬೆಯ ತುಂಡುಗಳಲ್ಲದೆ, ಏಳು ಕಲ್ಲುಗಳಿಗೆ ಊರಮಂಜ ಬಣ್ಣ ಲೇಪಿಸಿ, ಕುಂಕುಮಾರ್ಚನೆ ಮಾಡಿದರು.</p>.<p>ಮಾತೆಯರ ಪ್ರತಿಬಿಂಬದ ಹಿಂದೆ ‘ಲೂಕಡ್’ (ಸೇವಕ) ನನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಾರೆ. ಬಳಿಕ, ಕುರಿ-ಕೋಳಿ ಹರಕೆ ಹೊತ್ತ ಭಕ್ತರು ಲೂಕಡ್ಗೆ ರಕ್ತಾಭಿಷೇಕ ಹಾಗೂ ಮಾತೆಯರಿಗೆ ಸಿಹಿ ಭೋಜನದ ಎಡೆ ಸಲ್ಲಿಸುತ್ತಾರೆ.</p>.<p class="Subhead">ಐತಿಹ್ಯ: ಪುತ್ರ ಸಂತಾನ ಇಲ್ಲದೆ ಕೌಟುಂಬಿಕ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಸಮಾಜದ ಹಿರಿಯ ಭೀಮಾನಾಯ್ಕ ಮಕ್ಕಳ ಸಂತಾನಪ್ರಾಪ್ತಿಗಾಗಿ ಕಠಿಣ ತಪಸ್ಸಿಗೆ ಕೂರುತ್ತಾನೆ. ಈ ಸಂದರ್ಭದಲ್ಲಿ ಏಳು ಮಂದಿ ಮಾತೆಯರು ಸೂರಗೊಂಡನಕೊಪ್ಪದ ಸಮೀಪದ ಚಿನ್ನಿಕಟ್ಟೆ ಹೊಂಡದಲ್ಲಿ ಸ್ನಾನಕ್ಕೆ ಇಳಿದಿದ್ದರಂತೆ. ಸ್ನಾನದ ಸಂದರ್ಭದಲ್ಲಿ ಮೈಉಜ್ಜುವಾಗ ಕಾಣಿಸಿಕೊಂಡ ಮಣ್ಣಿನಿಂದಲೇ ಮಾತ್ರೆಗಳಂತೆ ಉಂಡೆ ಮಾಡಿ ತಪಸ್ವಿ ಭೀಮಾನಾಯ್ಕನ ಪತ್ನಿ ಧರ್ಮೀಬಾಯಿಗೆ ಸೇವಿಸಲು ನೀಡಿದರಂತೆ. ಈ ಏಳು ಮಂದಿ ಮಾತೆಯರು ನೀಡಿದ ಮಾತ್ರೆ ಸೇವನೆಯ ಪರಿಣಾಮ ಜನಿಸಿದ ಮಹಾಮಹಿಮನೇ ಸೇವಾಲಾಲ್ ಎಂಬುದು ಬಂಜಾರ ಸಮುದಾಯದ ನಂಬಿಕೆ.</p>.<p>ಅದರಂತೆ ಇಂದಿಗೂ ಸೀತ್ಲಾ ಹಬ್ಬದ ಆಚರಣೆ ರೂಢಿಯಲ್ಲಿದೆ ಹಾಗೂ ಸಮುದಾಯದವರು ಭಕ್ತಿ ಭಾವದಿಂದ ಇದರಲ್ಲಿ ಪಾಲ್ಗೊಂಡು ಆಚರಣೆ ಮಾಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ತಾಲ್ಲೂಕು ಸಹಿತ ಜಿಲ್ಲೆಯ ವಿವಿಧೆಡೆ ಮಣ್ಣೆತ್ತಿನ ಅಮಾವಾಸ್ಯೆಯ ನಂತರದ ಮೊದಲ ಮಂಗಳವಾರ ಬಂಜಾರ (ಲಂಬಾಣಿ) ಸಮುದಾಯದವರು ಸೀತ್ಲಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.</p>.<p>ರೋಗ-ರುಜಿನಗಳು ದೂರವಾಗಲಿ, ಧನ-ಧಾನ್ಯ ಸಮೃದ್ಧಿಯಾಗಿ ಬೆಳೆದು ಸುಖ, ಶಾಂತಿ ನೆಮ್ಮದಿಯ ಬದುಕು ನಮ್ಮದಾಗಲಿ ಎಂದು ಪ್ರಾರ್ಥಿಸಿ ತುಳಜಾ ಭವಾನಿ, ಈಂಗಳ ಭವಾನಿ, ಮರಿಯಾ ಭವಾನಿ, ಮತ್ರೋಡಿ ಭವಾನಿ, ದೋಳಂಗಲ್ ಭವಾನಿ ಹಾಗೂ ಕೀಲಕಂಟಕ ಭವಾನಿ ದೇವತೆಗಳನ್ನು ಊರ ಹೊರಗೆ ಬೇವಿನಮರದ ಬುಡದಲ್ಲಿ ಪೂಜಿಸುವುದೇ ಈ ಆಚರಣೆಯ ಪ್ರಮುಖ ಅಂಶವಾಗಿದೆ.</p>.<p>ಸಮುದಾಯದವರು ಭಕ್ತಿ ಭಾವದಿಂದ ಏಳು ಮಾತೆಯರನ್ನು ಪ್ರತಿಬಿಂಬಿಸುವ ದೇವತೆಗಳನ್ನು ಪ್ರತಿಷ್ಠಾಪಿಸಿದರು. ಮರದ ಏಳು ಕೊಂಬೆಯ ತುಂಡುಗಳಲ್ಲದೆ, ಏಳು ಕಲ್ಲುಗಳಿಗೆ ಊರಮಂಜ ಬಣ್ಣ ಲೇಪಿಸಿ, ಕುಂಕುಮಾರ್ಚನೆ ಮಾಡಿದರು.</p>.<p>ಮಾತೆಯರ ಪ್ರತಿಬಿಂಬದ ಹಿಂದೆ ‘ಲೂಕಡ್’ (ಸೇವಕ) ನನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಾರೆ. ಬಳಿಕ, ಕುರಿ-ಕೋಳಿ ಹರಕೆ ಹೊತ್ತ ಭಕ್ತರು ಲೂಕಡ್ಗೆ ರಕ್ತಾಭಿಷೇಕ ಹಾಗೂ ಮಾತೆಯರಿಗೆ ಸಿಹಿ ಭೋಜನದ ಎಡೆ ಸಲ್ಲಿಸುತ್ತಾರೆ.</p>.<p class="Subhead">ಐತಿಹ್ಯ: ಪುತ್ರ ಸಂತಾನ ಇಲ್ಲದೆ ಕೌಟುಂಬಿಕ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಸಮಾಜದ ಹಿರಿಯ ಭೀಮಾನಾಯ್ಕ ಮಕ್ಕಳ ಸಂತಾನಪ್ರಾಪ್ತಿಗಾಗಿ ಕಠಿಣ ತಪಸ್ಸಿಗೆ ಕೂರುತ್ತಾನೆ. ಈ ಸಂದರ್ಭದಲ್ಲಿ ಏಳು ಮಂದಿ ಮಾತೆಯರು ಸೂರಗೊಂಡನಕೊಪ್ಪದ ಸಮೀಪದ ಚಿನ್ನಿಕಟ್ಟೆ ಹೊಂಡದಲ್ಲಿ ಸ್ನಾನಕ್ಕೆ ಇಳಿದಿದ್ದರಂತೆ. ಸ್ನಾನದ ಸಂದರ್ಭದಲ್ಲಿ ಮೈಉಜ್ಜುವಾಗ ಕಾಣಿಸಿಕೊಂಡ ಮಣ್ಣಿನಿಂದಲೇ ಮಾತ್ರೆಗಳಂತೆ ಉಂಡೆ ಮಾಡಿ ತಪಸ್ವಿ ಭೀಮಾನಾಯ್ಕನ ಪತ್ನಿ ಧರ್ಮೀಬಾಯಿಗೆ ಸೇವಿಸಲು ನೀಡಿದರಂತೆ. ಈ ಏಳು ಮಂದಿ ಮಾತೆಯರು ನೀಡಿದ ಮಾತ್ರೆ ಸೇವನೆಯ ಪರಿಣಾಮ ಜನಿಸಿದ ಮಹಾಮಹಿಮನೇ ಸೇವಾಲಾಲ್ ಎಂಬುದು ಬಂಜಾರ ಸಮುದಾಯದ ನಂಬಿಕೆ.</p>.<p>ಅದರಂತೆ ಇಂದಿಗೂ ಸೀತ್ಲಾ ಹಬ್ಬದ ಆಚರಣೆ ರೂಢಿಯಲ್ಲಿದೆ ಹಾಗೂ ಸಮುದಾಯದವರು ಭಕ್ತಿ ಭಾವದಿಂದ ಇದರಲ್ಲಿ ಪಾಲ್ಗೊಂಡು ಆಚರಣೆ ಮಾಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>