ಹೊಸಪೇಟೆ: 56 ಬಾಲಕರಿಗೆ ಶಿವದೀಕ್ಷೆ

ಹೊಸಪೇಟೆ (ವಿಜಯನಗರ): ‘ಶಿವದೀಕ್ಷೆಯಿಂದ ಗುರು, ಲಿಂಗ ಮತ್ತು ಜಂಗಮ ದೀಕ್ಷೆ ಲಭಿಸುತ್ತದೆ’ ಎಂದು ಮರಿಯಮ್ಮನಹಳ್ಳಿ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಕೊಟ್ಟೂರು ಸಂಸ್ಥಾನ ಮಠದ ಆವರಣದಲ್ಲಿ ಭಾನುವಾರ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘ ಉದ್ಘಾಟನೆ ಹಾಗೂ ಶಿವದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜಂಗಮನಲ್ಲಿ ಶಿವನ ಅಂಶವಿದೆ. ಶಿವದೀಕ್ಷೆಯಿಂದ ಶಿವಶಕ್ತಿ ಲಭಿಸಲಿದೆ. ಜಂಗಮರು ಎಂದಿಗೂ ಸತ್ಸಂಗ ಮಾರ್ಗದಿಂದ ನಡೆಯಬೇಕು. ಸಮುದಾಯದಲ್ಲಿ ಒಗ್ಗಟ್ಟಿದ್ದರೆ ಸಮಾಜದಲ್ಲಿ ಏಳಿಗೆ ಕಾಣಬಹುದು’ ಎಂದರು.
ಇದೇ ವೇಳೆ 56 ಬಾಲಕರಿಗೆ ನೂತನವಾಗಿ ಶಿವದೀಕ್ಷೆ (ಅಯ್ಯಾಚಾರ) ನೀಡಿ ಪತ್ರ ಪಠಣೆ ನೆರವೇರಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘದ ಜಿಲ್ಲಾ ಘಟಕವನ್ನು ಉದ್ಘಾಟಿಸಲಾಯಿತು.
ಕರಿಸಿದ್ಧೇಶ್ವರ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ವರಸಧ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ಮಹೇಶ್ವರ ಸ್ವಾಮೀಜಿ, ಅಭಿನವ ಶಿವಲಿಂಗರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮುಖಂಡರಾದ ಡಿ.ಎಂ.ಗಂಗಾಧಯರಯ್ಯ ಶಾಸ್ತ್ರಿ, ಎಚ್.ವಿ.ಶರಣ ಸ್ವಾಮಿ, ಗೊಗ್ಗ ಚನ್ನಬಸವರಾಜ, ಸಾಲಿ ಸಿದ್ದಯ್ಯ ಸ್ವಾಮಿ, ಬಿ.ಎಂ.ಸೋಮಶೇಖರ, ಎಚ್.ಎಂ.ಚಂದ್ರಶೇಖರ ಶಾಸ್ತ್ರಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.