ತರಕಾರಿ, ಹಣ್ಣು, ಹಾಲು, ದಿನಪತ್ರಿಕೆ, ಔಷಧ ಮಳಿಗೆಗಳನ್ನು ಹೊರತುಪಡಿಸಿ ಮಿಕ್ಕಳಿದವುಗಳನ್ನು ಬಂದ್ ಮಾಡಿಸಿದರು. ಹೋಟೆಲ್ಗಳಲ್ಲಿ ಜನರನ್ನು ಸೇರಿಸದಂತೆ ಎಚ್ಚರಿಕೆ ನೀಡಿದರು. ಗ್ರಾಹಕರಿಗೆ ಪಾರ್ಸೆಲ್ ಮಾತ್ರ ಕೊಡಬೇಕು ಎಂದು ತಿಳಿಸಿದ್ದರಿಂದ ಬಹುತೇಕ ಹೋಟೆಲ್ಗಳಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಕೆಲವರು ಪಾರ್ಸೆಲ್ ತೆಗೆದುಕೊಂಡು, ಮರದಡಿ, ಕಟ್ಟಡಗಳ ನೆರಳಿನ ಅಡಿಯಲ್ಲಿ ನಿಂತುಕೊಂಡು ಆಹಾರ ಸೇವಿಸಿದರು.