ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಎಫ್.ಟಿ.ಹಳ್ಳಿಕೇರಿ ಮಾತನಾಡಿ, ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 75 ಕೋಟಿ ಸೂರ್ಯನಮಸ್ಕಾರ ಅಭಿಯಾನ ಕೈಗೊಂಡು ದೇಶದಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು. ಆರ್. ಪಾಂಡುರಂಗರಾವ್, ಕಾಲೇಜಿನ ಕಾರ್ಯದರ್ಶಿ ಒಪ್ಪತ್ತೆಪ್ಪ ಯಲಿಗಾರ, ಬಸವರಾಜ, ಕಿರಣಕುಮಾರ್, ದಾಕ್ಷಾಯಣಿ ಶಿವಕುಮಾರ, ಪೂಜಾ ಐಲಿ, ಅಶೋಕ ಚಿತ್ರಗಾರ, ಚಂದ್ರಶೇಖರ, ಶ್ರೀನಾಥ ಇದ್ದರು.