<p><strong>ಹೊಸಪೇಟೆ (ವಿಜಯನಗರ):</strong> ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್ಗೇಟ್ಗಳ ಪೈಕಿ 18ನೇ ಗೇಟ್ನ ಒಂದು ಸಣ್ಣ ಭಾಗವನ್ನು ಕತ್ತರಿಸಿ ಕ್ರೇನ್ ಮೂಲಕ ಹೊರತರುವ ಕೆಲಸ ನಡೆಯಿತು.</p>.<p>ಸದ್ಯ ಅಣೆಕಟ್ಟೆಯಲ್ಲಿ 18ನೇ ಗೇಟ್ನ ಒಂದು ಭಾಗ ನೀರಿನ ಮಟ್ಟಕ್ಕಿಂತ 10 ಅಡಿಗೂ ಹೆಚ್ಚು ಎತ್ತರದಲ್ಲಿದೆ. ಮೊದಲಿಗೆ ಅದೇ ಗೇಟ್ನ ಒಂದು ಭಾಗವನ್ನು ಕತ್ತರಿಸಿ ತೆಗೆಯಲಾಯಿತು.</p>.<p>ಅಣೆಕಟ್ಟೆ ಮಧ್ಯಭಾಗದಲ್ಲಿ ತೆರವು ಕಾರ್ಯ ನಡೆದಿದೆ. ಡಿಸೆಂಬರ್ ಮೂರನೇ ವಾರದ ವೇಳೆಗೆ ಕೆಲವು ಗೇಟ್ಗಳ ಭಾಗಗಳು ತೆರವು ಮಾಡುವ ನಿರೀಕ್ಷೆ ಇದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.</p>.<p><span class="bold"><strong>ಅಣೆಕಟ್ಟೆಯ ಮೇಲೆ ಕ್ರೇನ್:</strong> </span>ಅಣೆಕಟ್ಟೆ ಮೇಲೆ ಭಾನುವಾರ ಮೊದಲ ಬಾರಿಗೆ ಕ್ರೇನ್ ಕಾಣಿಸಿಕೊಂಡಿತು. ಗೇಟ್ ಭಾಗವನ್ನು ಗ್ಯಾಸ್ ಕಟ್ಟರ್ನಿಂದ ಕತ್ತರಿಸಿದ ತಕ್ಷಣ ಕ್ರೇನ್ ಬಳಸಿ ಎತ್ತಿ ಮೇಲಕ್ಕೆ ತರಲಾಯಿತು.</p>.<p>ಸದ್ಯ ಜಲಾಶಯದಲ್ಲಿ 65.52 ಟಿಎಂಸಿ ಅಡಿ ನೀರಿದ್ದು, ಕಾಲುವೆಗಳಿಗೆ 9,194 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ನಿತ್ಯ ಟಿಎಂಸಿ ಅಡಿಯಷ್ಟು ನೀರು ಖಾಲಿಯಾಗುತ್ತಿದೆ. ಇದೇ ಪ್ರಮಾಣದಲ್ಲಿ ಖಾಲಿ ಆದರೆ, 43 ಟಿಎಂಸಿ ಅಡಿಗೆ ತಲುಪಲು 20 ದಿನ ಬೇಕು. ಆಂಧ್ರ, ತೆಲಂಗಾಣದ ನೀರು ಹಂಚಿಕೆ ಕೋಟಾ ಮುಗಿಸಿದರೆ ಇನ್ನೂ ಬೇಗ ಜಲಾಶಯದ ನೀರು ಖಾಲಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್ಗೇಟ್ಗಳ ಪೈಕಿ 18ನೇ ಗೇಟ್ನ ಒಂದು ಸಣ್ಣ ಭಾಗವನ್ನು ಕತ್ತರಿಸಿ ಕ್ರೇನ್ ಮೂಲಕ ಹೊರತರುವ ಕೆಲಸ ನಡೆಯಿತು.</p>.<p>ಸದ್ಯ ಅಣೆಕಟ್ಟೆಯಲ್ಲಿ 18ನೇ ಗೇಟ್ನ ಒಂದು ಭಾಗ ನೀರಿನ ಮಟ್ಟಕ್ಕಿಂತ 10 ಅಡಿಗೂ ಹೆಚ್ಚು ಎತ್ತರದಲ್ಲಿದೆ. ಮೊದಲಿಗೆ ಅದೇ ಗೇಟ್ನ ಒಂದು ಭಾಗವನ್ನು ಕತ್ತರಿಸಿ ತೆಗೆಯಲಾಯಿತು.</p>.<p>ಅಣೆಕಟ್ಟೆ ಮಧ್ಯಭಾಗದಲ್ಲಿ ತೆರವು ಕಾರ್ಯ ನಡೆದಿದೆ. ಡಿಸೆಂಬರ್ ಮೂರನೇ ವಾರದ ವೇಳೆಗೆ ಕೆಲವು ಗೇಟ್ಗಳ ಭಾಗಗಳು ತೆರವು ಮಾಡುವ ನಿರೀಕ್ಷೆ ಇದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.</p>.<p><span class="bold"><strong>ಅಣೆಕಟ್ಟೆಯ ಮೇಲೆ ಕ್ರೇನ್:</strong> </span>ಅಣೆಕಟ್ಟೆ ಮೇಲೆ ಭಾನುವಾರ ಮೊದಲ ಬಾರಿಗೆ ಕ್ರೇನ್ ಕಾಣಿಸಿಕೊಂಡಿತು. ಗೇಟ್ ಭಾಗವನ್ನು ಗ್ಯಾಸ್ ಕಟ್ಟರ್ನಿಂದ ಕತ್ತರಿಸಿದ ತಕ್ಷಣ ಕ್ರೇನ್ ಬಳಸಿ ಎತ್ತಿ ಮೇಲಕ್ಕೆ ತರಲಾಯಿತು.</p>.<p>ಸದ್ಯ ಜಲಾಶಯದಲ್ಲಿ 65.52 ಟಿಎಂಸಿ ಅಡಿ ನೀರಿದ್ದು, ಕಾಲುವೆಗಳಿಗೆ 9,194 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ನಿತ್ಯ ಟಿಎಂಸಿ ಅಡಿಯಷ್ಟು ನೀರು ಖಾಲಿಯಾಗುತ್ತಿದೆ. ಇದೇ ಪ್ರಮಾಣದಲ್ಲಿ ಖಾಲಿ ಆದರೆ, 43 ಟಿಎಂಸಿ ಅಡಿಗೆ ತಲುಪಲು 20 ದಿನ ಬೇಕು. ಆಂಧ್ರ, ತೆಲಂಗಾಣದ ನೀರು ಹಂಚಿಕೆ ಕೋಟಾ ಮುಗಿಸಿದರೆ ಇನ್ನೂ ಬೇಗ ಜಲಾಶಯದ ನೀರು ಖಾಲಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>