ಗುಡ್ಡಕ್ಕೆ ಬೆಂಕಿ:ಸಂಡೂರು ರಸ್ತೆಯ ಕಾಯ್ದಿಟ್ಟ ಅರಣ್ಯ ಪ್ರದೇಶದ ಅಂಜಿನಮ್ಮನ ಬಗಡಿ ಗುಡ್ಡದಲ್ಲಿ ಶುಕ್ರವಾರ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಅಪಾರ ಗಿಡ, ಮರಗಳು ಸುಟ್ಟು ಕರಕಲಾಗಿವೆ. ‘ಗುಡ್ಡದಲ್ಲಿ ಹುಲ್ಲು, ಗಿಡ, ಮರಗಳು ಒಣಗಿ ಹೋಗಿವೆ. ಕೆಂಡದಂತಹ ಬಿಸಿಲಿಗೆ ಬೆಂಕಿ ಹೊತ್ತಿಕೊಂಡಿರಬಹುದು. ವಿಷಯ ತಿಳಿದು, ಬೆಂಕಿ ಬೇರೆಡೆ ವ್ಯಾಪಿಸಿಕೊಳ್ಳದಂತೆ ತಡೆಯಲಾಗಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.