ಹೊಸಪೇಟೆ : ನಗರದ ಶಾರದಾ ಬುಕ್ಸ್ಟಾಲ್ನ ಮಹೇಶ್ ಕುಡುತಿನಿ ಅವರ ಪುತ್ರ ಕೆ.ವಾಗೀಶ್ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಶೇಷವೆಂದರೆ ಇವರು ಈಗಲೂ ಮನೆ ಮನೆಗೆ ಪತ್ರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ.
ವಾಗೀಶ್ ಅವರ ಸಹಪಾಠಿ ಚಪ್ಪರದಳ್ಳಿಯ ಜಿ.ಜಂಬಯ್ಯ ಅವರ ಪುತ್ರ ಜಿ.ಪ್ರವೀಣ್ ಸಹ ಸಿ.ಎ ಉತ್ತೀರ್ಣರಾಗಿದ್ದಾರೆ.
ಇಬ್ಬರೂ ನಗರದ ವಿಷನ್ ಪ್ರೊಫೆಷನಲ್ ಅಕಾಡೆಮಿಯಲ್ಲಿ ಕೋಚಿಂಗ್ ಪಡೆದಿದ್ದರು. ಮಹಿಳಾ ಸಮಾಜ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ನ್ಯಾಷನಲ್ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡಿದ್ದರು.