ದಾವಣಗೆರೆ ನಗರದ ಹುಚ್ಚಪ್ಪ(60) ಹೃದಯಾಘಾತದಿಂದ ಮೃತಪಟ್ಟ ಭಕ್ತ. ಸೀಗೆ (ಭೂಮಿ) ಹುಣ್ಣಿಮೆ ಅಂಗವಾಗಿ ಹರಕೆ ತೀರಿಸಲು ಮೆಟ್ಟಿಲುಗಳ ಮೂಲಕ ಎತ್ತರದ ಬೆಟ್ಟ ಹತ್ತಿದ್ದ ಹುಚ್ಚಪ್ಪ ದೈಹಿಕವಾಗಿ ಬಳಲಿದ್ದರು. ದೇವಿಯ ಭಕ್ತ ತೀವ್ರವಾಗಿ ಬಳಲುತ್ತಿರುವ ವಿಷಯ ತಿಳಿದ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ, ಸಿಬ್ಬಂದಿ ವರ್ಗ ನೀರುಕೊಟ್ಟು ಉಪಚರಿಸಿದ್ದಾರೆ. ಆದರೆ, ಬೆಟ್ಟದ ಮೇಲಿಂದ ಕೆಳಗಿಳಿಸುವ ಮಾರ್ಗ ಮಧ್ಯೆಯೇ ಭಕ್ತ ಹುಚ್ಚಪ್ಪ ಮೃತಪಟ್ಟಿದ್ದಾರೆ.