ಹೊಸಪೇಟೆ (ವಿಜಯನಗರ): ಬಹುಜನ ಸಾಹಿತ್ಯ ಅಕಾಡೆಮಿ ರಾಜ್ಯ ಘಟಕದ ಅಧ್ಯಕ್ಷೆಯಾಗಿ ಎನ್.ಡಿ. ವೆಂಕಮ್ಮ ನೇಮಕಗೊಂಡಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷ ನಲ್ಲಾ ರಾಧಕೃಷ್ಣ ಅವರು ವೆಂಕಮ್ಮ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಅಧ್ಯಕ್ಷೆಯಾದ ನಂತರ ಮಂಗಳವಾರ ತಾಲ್ಲೂಕಿನ ಕಮಲಾಪುರದಲ್ಲಿ ಸಭೆ ನಡೆಸಿದ ವೆಂಕಮ್ಮ ಅವರು, ‘ಅಕಾಡೆಮಿ ಮೂಲಕ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ತಿಳಿಸಿದರು.
ಅಕಾಡೆಮಿಯ ರಾಜ್ಯ ಘಟಕದ ಅಧ್ಯಕ್ಷ ವೆಂಕಟೇಶ್, ಸದಸ್ಯರಾದ ಗೋವಿಂದ, ಅಮರೇಶ ಯತಗಲ್, ಸಿದ್ದಗಂಗಮ್ಮ ಇದ್ದರು.