ಈ ಸಲ ರಾಜ್ಯಮಟ್ಟದ ಯೋಗ ದಿನಾಚರಣೆ ಹಂಪಿಯಲ್ಲಿ ಆಯೋಜಿಸುವುದರ ಬಗ್ಗೆ ಸಚಿವರೊಂದಿಗೆ ಚರ್ಚಿಸಲಾಗಿದೆ. ಹಂಪಿಯ ಸ್ಮಾರಕಗಳಾದ ವಿಜಯ ವಿಠ್ಠಲ ದೇವಸ್ಥಾನ, ಕಮಲ ಮಹಲ್, ವಿರೂಪಾಕ್ಷೇಶ್ವರ ದೇವಾಲಯ, ಆನೆಸಾಲು ಮಂಟಪ, ಉಗ್ರನರಸಿಂಹ ಸ್ಮಾರಕದ ಪರಿಸರದಲ್ಲಿ ಯೋಗ ಉತ್ಸವ ಹಮ್ಮಿಕೊಳ್ಳುವ ಯೋಜನೆ ಇದೆ. ಅದಕ್ಕಾಗಿಯೇ ಎಲ್ಲ ಸ್ಮಾರಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.