ಕೆರೆ ತುಂಬುವ ಯೋಜನೆಯಡಿ ಕೃಷ್ಣಾ ನದಿಯಿಂದ ಕಳೆದ ಬಾರಿ ದ್ಯಾಬೇರಿ ಕೆರೆಯನ್ನು ತುಂಬಿಸಲಾಗಿತ್ತು. ಈ ಕೆರೆ ನೀರನ್ನು ಸಾರ್ವಜನಿಕರಿಗಾಗಿ ಊರಿನಲ್ಲಿರುವ ಬಾವಿಗೆ ತುಂಬಿಸಲಾಗುತ್ತಿತ್ತು. ಗ್ರಾಮದ ಅರ್ಧ ಭಾಗಕ್ಕೆ ಒಂದು ದಿನ, ಇನ್ನರ್ಥ ಭಾಗಕ್ಕೆ ಮರುದಿನದಂತೆ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ. ಆದರೆ, ಈಗ ಕೆರೆ ನೀರನ್ನು ಪೂರೈಕೆ ಮಾಡದೇ ಇರುವುದರಿಂದ ಬೇಸಿಗೆಯಲ್ಲಿ ಜನರು ಪರದಾಡುವಂತಾಗಿದೆ ಎಂದು ಆರೋಪಿಸಿದರು.