<p><strong>ವಿಜಯಪುರ</strong>: ‘ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿನ ಅಕ್ಕಮಹಾದೇವಿಯ ಅರೆಬೆತ್ತಲೆ ಮೂರ್ತಿ ತೆರವುಗೊಳಿಸಿ, ಶುಭ್ರ ವಸ್ತ್ರದ ಸೀರೆಯುಟ್ಟ ಅಕ್ಕನ ಮೂರ್ತಿ ಸ್ಥಾಪಿಸಿ’ ಎಂದು ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಶಶಿಕಾಂತ ಆರ್. ಪಟ್ಟಣ ಆಗ್ರಹಿಸಿದರು. </p>.<p>‘ವಿರಾಗಿಣಿ ಅಕ್ಕಮಹಾದೇವಿ ಎಂದೂ ಅರೆಬೆತ್ತಲೆ ಆಗಿರಲಿಲ್ಲ. ಶರಣ ಸಂಕುಲದ ಶ್ರೇಷ್ಠ ಅನುಭಾವಿಯಾಗಿದ್ದ ಅವರು ಅರೆಬೆತ್ತಲೆಯಾಗಿ ಬಂದಿಲ್ಲ ಎನ್ನುವುದಕ್ಕೆ ಹಲವು ಉಲ್ಲೇಖ ಮತ್ತು ಪುರಾವೆಗಳಿವೆ. ಅರೆಬೆತ್ತಲೆ ಮೂರ್ತಿಯು ಶರಣರಿಗೆ ಹಾಗೂ ವಿರಾಗಿಣಿ ಅಕ್ಕಮಹಾದೇವಿಗೆ ಮಾಡಿದ ದ್ರೋಹ ಮತ್ತು ಅಪಮಾನವಾಗಿದೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.</p>.<p><strong>ಅಧ್ಯಯನ ಪೀಠ:</strong></p>.<p>‘ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಬಸವ ಅಧ್ಯಯನ ಪೀಠ ಆರಂಭಿಸಬೇಕು ಮತ್ತು ಸರ್ಕಾರ ಅನುದಾನ ಒದಗಿಸಬೇಕು. ಬಸವೇಶ್ವರರ ಜನ್ಮ ಸ್ಥಳವಾದ ವಿಜಯಪುರ ಜಿಲ್ಲೆಯ ಹೆಸರನ್ನು ಬಸವೇಶ್ವರ ಜಿಲ್ಲೆ ಎಂದು ಮರು ನಾಮಕರಣ ಮಾಡಬೇಕು. ವಚನಗಳ ಸಂರಕ್ಷಣೆಗೆ ಶ್ರಮಿಸಿದ ಫ.ಗು.ಹಳಕಟ್ಟಿ ಅವರ ಹೆಸರಿನಲ್ಲಿ ‘ಪಂಪ ಪ್ರಶಸ್ತಿ’ ಮಾದರಿಯಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಬೇಕು’ ಎಂದು ಅವರು ಒತ್ತಾಯಿಸಿದರು.</p>.<p><strong>ಪಂಚಾಚಾರ್ಯರಿಗೆ ಸಂಬಂಧವಿಲ್ಲ:</strong></p>.<p>‘ಪಂಚಾಚಾರ್ಯರಿಗೂ ಬಸವ ತತ್ವಕ್ಕೂ ಯಾವುದೇ ಸಂಬಂಧವಿಲ್ಲ. ಎರಡರ ನಡುವೆ ಸಾಕಷ್ಟು ಭಿನ್ನತೆ ಇದೆ. ಬಸವಣ್ಣ ಎಲ್ಲಿಯೂ ವೀರಶೈವ ಪದ ಬಳಸಿಲ್ಲ. ವೀರಶೈವ ಪದ ಬಳಕೆ 1386ರಲ್ಲಿ ಬಂದಿದೆ. ಅದಕ್ಕೂ ಮೊದಲು ಇರಲಿಲ್ಲ. ಬಸವಣ್ಣ ಹಿಂದೂ ಅಥವಾ ವೀರಶೈವ ವಿರೋಧಿಯಲ್ಲ. ಹಾಗೆಯೇ, ಬಸವಣ್ಣ ವೀರಶೈವನೂ ಅಲ್ಲ, ಹಿಂದುವು ಅಲ್ಲ’ ಎಂದು ಶಶಿಕಾಂತ ಆರ್. ಪಟ್ಟಣ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ‘ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿನ ಅಕ್ಕಮಹಾದೇವಿಯ ಅರೆಬೆತ್ತಲೆ ಮೂರ್ತಿ ತೆರವುಗೊಳಿಸಿ, ಶುಭ್ರ ವಸ್ತ್ರದ ಸೀರೆಯುಟ್ಟ ಅಕ್ಕನ ಮೂರ್ತಿ ಸ್ಥಾಪಿಸಿ’ ಎಂದು ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಶಶಿಕಾಂತ ಆರ್. ಪಟ್ಟಣ ಆಗ್ರಹಿಸಿದರು. </p>.<p>‘ವಿರಾಗಿಣಿ ಅಕ್ಕಮಹಾದೇವಿ ಎಂದೂ ಅರೆಬೆತ್ತಲೆ ಆಗಿರಲಿಲ್ಲ. ಶರಣ ಸಂಕುಲದ ಶ್ರೇಷ್ಠ ಅನುಭಾವಿಯಾಗಿದ್ದ ಅವರು ಅರೆಬೆತ್ತಲೆಯಾಗಿ ಬಂದಿಲ್ಲ ಎನ್ನುವುದಕ್ಕೆ ಹಲವು ಉಲ್ಲೇಖ ಮತ್ತು ಪುರಾವೆಗಳಿವೆ. ಅರೆಬೆತ್ತಲೆ ಮೂರ್ತಿಯು ಶರಣರಿಗೆ ಹಾಗೂ ವಿರಾಗಿಣಿ ಅಕ್ಕಮಹಾದೇವಿಗೆ ಮಾಡಿದ ದ್ರೋಹ ಮತ್ತು ಅಪಮಾನವಾಗಿದೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.</p>.<p><strong>ಅಧ್ಯಯನ ಪೀಠ:</strong></p>.<p>‘ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಬಸವ ಅಧ್ಯಯನ ಪೀಠ ಆರಂಭಿಸಬೇಕು ಮತ್ತು ಸರ್ಕಾರ ಅನುದಾನ ಒದಗಿಸಬೇಕು. ಬಸವೇಶ್ವರರ ಜನ್ಮ ಸ್ಥಳವಾದ ವಿಜಯಪುರ ಜಿಲ್ಲೆಯ ಹೆಸರನ್ನು ಬಸವೇಶ್ವರ ಜಿಲ್ಲೆ ಎಂದು ಮರು ನಾಮಕರಣ ಮಾಡಬೇಕು. ವಚನಗಳ ಸಂರಕ್ಷಣೆಗೆ ಶ್ರಮಿಸಿದ ಫ.ಗು.ಹಳಕಟ್ಟಿ ಅವರ ಹೆಸರಿನಲ್ಲಿ ‘ಪಂಪ ಪ್ರಶಸ್ತಿ’ ಮಾದರಿಯಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಬೇಕು’ ಎಂದು ಅವರು ಒತ್ತಾಯಿಸಿದರು.</p>.<p><strong>ಪಂಚಾಚಾರ್ಯರಿಗೆ ಸಂಬಂಧವಿಲ್ಲ:</strong></p>.<p>‘ಪಂಚಾಚಾರ್ಯರಿಗೂ ಬಸವ ತತ್ವಕ್ಕೂ ಯಾವುದೇ ಸಂಬಂಧವಿಲ್ಲ. ಎರಡರ ನಡುವೆ ಸಾಕಷ್ಟು ಭಿನ್ನತೆ ಇದೆ. ಬಸವಣ್ಣ ಎಲ್ಲಿಯೂ ವೀರಶೈವ ಪದ ಬಳಸಿಲ್ಲ. ವೀರಶೈವ ಪದ ಬಳಕೆ 1386ರಲ್ಲಿ ಬಂದಿದೆ. ಅದಕ್ಕೂ ಮೊದಲು ಇರಲಿಲ್ಲ. ಬಸವಣ್ಣ ಹಿಂದೂ ಅಥವಾ ವೀರಶೈವ ವಿರೋಧಿಯಲ್ಲ. ಹಾಗೆಯೇ, ಬಸವಣ್ಣ ವೀರಶೈವನೂ ಅಲ್ಲ, ಹಿಂದುವು ಅಲ್ಲ’ ಎಂದು ಶಶಿಕಾಂತ ಆರ್. ಪಟ್ಟಣ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>