<p><strong>ನಾಲತವಾಡ</strong>: ‘ಪಟ್ಟಣದ 4ನೇ ಅಂಗನವಾಡಿಯಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಮಧ್ಯೆ ಹೊಂದಾಣಿಕೆ ಕೊರತೆಯಿಂದ ವಿತರಣೆಯಾಗಬೇಕಿದ್ದ ಗರ್ಭಿಣಿಯರ ಆಹಾರ, ಮೊಟ್ಟೆ ಹಾಗೂ ಮಕ್ಕಳಿಗೆ ಕಳಪೆ ಊಟ ಸೇರಿದಂತೆ ಹಲವು ವರ್ಷಗಳಿಂದಲೂ ಅವ್ಯವಸ್ಥೆ ಮುಂದುವರಿದೆ’ ಎಂಬ ಸಾರ್ವಜನೀಕರ ದೂರಿನ ಅನ್ವಯ ಸಿಡಿಪಿಒ ಶಿವಮೂರ್ತಿ ಕುಂಬಾರ ಸೋಮವಾರ ಭೇಟಿ ನೀಡಿ ಅವ್ಯವಸ್ಥೆಗೆ ದಿಗ್ಭ್ರಮೆ ವ್ಯಕ್ತಪಡಿಸಿದರು.</p>.<p>‘ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ವಿತರಣೆಯಾಗಬೇಕಿದ್ದ ಆಹಾರ ಇತರೇ ಸಾಮಗ್ರಿಗಳನ್ನು ಕಾರ್ಯಕರ್ತೆ ವಿತರಿಸುತ್ತಿಲ್ಲ, ಕೆಲಸ ನಿರ್ವಹಿಸುವ ಸಹಾಯಕಿಯೂ ಸಹ ಮಕ್ಕಳಿಗೆ ಗುಣಮಟ್ಟದ ಊಟ ಬಡಿಸುತ್ತಿಲ್ಲ, ಸರ್ಕಾರ ವಿತರಣೆ ಮಾಡಿದ ರವೆ, ಬೆಲ್ಲ ಮೊಟ್ಟೆ ಸೇರಿದಂತೆ ಕೇಂದ್ರದ ಎಲ್ಲೆಂದರಲ್ಲಿ ಎಸೆದಿದ್ದಾರೆ. ಅಲ್ಲದೇ ಆಹಾರ ವಿತರಣೆಯ ಅವಧಿಯೂ ಮುಗಿದ ಪರಿಣಾಮ ಚೀಲಗಳಲ್ಲೇ ನುಸಿ ಹುಳು ಉತ್ಪತ್ತಿಗೊಂಡಿವೆ, ಸರ್ಕಾರದ ನಿಯಮದಂತೆ ಫಲಾನುಭವಿಗಳಿಗೆ ಮೊಟ್ಟೆ ವಿತರಣೆ ಮಾಡದೇ ಮಾರಿಕೊಳ್ಳುತ್ತಿದ್ದಾರೆ’ ಎಂದು ಆ 10 ರಂದು ಆಕ್ರೋಶ ವ್ಯಕ್ತಪಡಿಸಿದ ಡಿಎಸ್ಎಸ್ ಮುಖಂಡ ರಾಜು ಮಸಬಿನಾಳ ಹಾಗೂ ಹುಸೆನ್ ಅವಟಿ ಸೇರಿದಂತೆ ಮಹಿಳಾ ಫಲಾನುಭವಿಗಳು ಕೊಳೆತ ಆಹಾರವನ್ನು ಕೇಂದ್ರದಲ್ಲೇ ಬೀಸಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.</p>.<p>ಕೇಂದ್ರದಲ್ಲಿನ ಅವ್ಯವಸ್ಥೆ ಗಮನಿಸಿದ ಸಿಡಿಪಿಒ ಕುಂಬಾರ ಅವರು ಕಾರ್ಯಕರ್ತೆ ರುದ್ರಮ್ಮ ಕೋಟಿ ಹಾಗೂ ಭಾರತಿ ಬೂದಿಹಾಳ ಅವರ ಮೇಲೆ ಗರಂ ಆದರು. ಕಳೆದ ಹಲವು ವರ್ಷಗಳಿಂದಲೂ ಈ ಕೇಂದ್ರದಲ್ಲಿ ಇಬ್ಬರ ಮದ್ಯೆ ಹೊಂದಾಣಿಕೆಯ ಕೊರತೆಯಲ್ಲಿ ಆಹಾರ ಮೊಟ್ಟೆ ಮೂಲೆಗುಂಪಾಗಿವೆ, ಮಕ್ಕಳಿಗೆ ಕಳಪೆ ಊಟ ಸಿದ್ಧಪಡಿಸಲಾಗುತ್ತಿದೆ, ಅಡುಗೆ ಕುಕ್ಕರ್ 3 ವರ್ಷಗಳಿಂದಲೂ ದುರಸ್ತಿ ಕಂಡಿಲ್ಲ. ಈ ಕುರಿತು ಶೀಘ್ರವೇ ನನಗೆ ಮಾಹಿತಿ ಸಂಗ್ರಹಿಸಿ ಕಾರ್ಯಕರ್ತೆ ಹಾಗೂ ಸಹಾಯಕಿಗೆ ನೋಟಿಸ್ ನೀಡಿ ಕಾರಣ ಕೇಳಿ ಎಂದು ಸ್ಥಳದಲ್ಲಿದ್ದ ಹಿರಿಯ ಮೇಲ್ವೀಚಾರಕಿ ಪಾರ್ವತಿ ಕಾಗಲ್ ಹಾಗೂ ಮೇಲ್ವಿಚಾರಕಿ ಶಕುಂತಲಾ ದೇಸಾಯಿ ಅವರಿಗೆ ಸೂಚಿಸಿದರು.</p>.<p> ‘ನಾಡಗೌಡ್ರ ಓಣಿಯ 4ನೇ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹಾಗೂ ಸಹಾಯಕಿ ಮಧ್ಯೆ ಹಲವು ದಿನಗಳಿಂದ ಸಹಕಾರದ ಕೊರತೆ ಕಂಡು ಬಂದಿದೆ. ಈಗಾಗಿ ಕೇಂದ್ರದಲ್ಲಿ ಆಹಾರ ಮೊಟ್ಟೆ ಇತರೇ ಸಾಮಗ್ರಿಗಳನ್ನು ಮಾರಿಕೊಂಡಿದ್ದಾರೆ ಎನ್ನುವ ಆರೋಪವಿದೆ, ಈ ಕುರಿತು ನೋಟಿಸ್ ನೀಡುತ್ತೇನೆ ಹಾಗೂ ಇಬ್ಬರಲ್ಲಿ ಒಬ್ಬರನ್ನು ಬೇರೆ ಕೇಂದ್ರಕ್ಕೆ ಎತ್ತಂಗಡಗೆ ಶಿಫಾರಸು ಮಾಡುತ್ತೇನೆ’ ಎಂದು <br> ಮುದ್ದೇಬಿಹಾಳ ಸಿಡಿಪಿಒ ಶಿವಮೂರ್ತಿ ಕುಂಬಾರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಲತವಾಡ</strong>: ‘ಪಟ್ಟಣದ 4ನೇ ಅಂಗನವಾಡಿಯಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಮಧ್ಯೆ ಹೊಂದಾಣಿಕೆ ಕೊರತೆಯಿಂದ ವಿತರಣೆಯಾಗಬೇಕಿದ್ದ ಗರ್ಭಿಣಿಯರ ಆಹಾರ, ಮೊಟ್ಟೆ ಹಾಗೂ ಮಕ್ಕಳಿಗೆ ಕಳಪೆ ಊಟ ಸೇರಿದಂತೆ ಹಲವು ವರ್ಷಗಳಿಂದಲೂ ಅವ್ಯವಸ್ಥೆ ಮುಂದುವರಿದೆ’ ಎಂಬ ಸಾರ್ವಜನೀಕರ ದೂರಿನ ಅನ್ವಯ ಸಿಡಿಪಿಒ ಶಿವಮೂರ್ತಿ ಕುಂಬಾರ ಸೋಮವಾರ ಭೇಟಿ ನೀಡಿ ಅವ್ಯವಸ್ಥೆಗೆ ದಿಗ್ಭ್ರಮೆ ವ್ಯಕ್ತಪಡಿಸಿದರು.</p>.<p>‘ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ವಿತರಣೆಯಾಗಬೇಕಿದ್ದ ಆಹಾರ ಇತರೇ ಸಾಮಗ್ರಿಗಳನ್ನು ಕಾರ್ಯಕರ್ತೆ ವಿತರಿಸುತ್ತಿಲ್ಲ, ಕೆಲಸ ನಿರ್ವಹಿಸುವ ಸಹಾಯಕಿಯೂ ಸಹ ಮಕ್ಕಳಿಗೆ ಗುಣಮಟ್ಟದ ಊಟ ಬಡಿಸುತ್ತಿಲ್ಲ, ಸರ್ಕಾರ ವಿತರಣೆ ಮಾಡಿದ ರವೆ, ಬೆಲ್ಲ ಮೊಟ್ಟೆ ಸೇರಿದಂತೆ ಕೇಂದ್ರದ ಎಲ್ಲೆಂದರಲ್ಲಿ ಎಸೆದಿದ್ದಾರೆ. ಅಲ್ಲದೇ ಆಹಾರ ವಿತರಣೆಯ ಅವಧಿಯೂ ಮುಗಿದ ಪರಿಣಾಮ ಚೀಲಗಳಲ್ಲೇ ನುಸಿ ಹುಳು ಉತ್ಪತ್ತಿಗೊಂಡಿವೆ, ಸರ್ಕಾರದ ನಿಯಮದಂತೆ ಫಲಾನುಭವಿಗಳಿಗೆ ಮೊಟ್ಟೆ ವಿತರಣೆ ಮಾಡದೇ ಮಾರಿಕೊಳ್ಳುತ್ತಿದ್ದಾರೆ’ ಎಂದು ಆ 10 ರಂದು ಆಕ್ರೋಶ ವ್ಯಕ್ತಪಡಿಸಿದ ಡಿಎಸ್ಎಸ್ ಮುಖಂಡ ರಾಜು ಮಸಬಿನಾಳ ಹಾಗೂ ಹುಸೆನ್ ಅವಟಿ ಸೇರಿದಂತೆ ಮಹಿಳಾ ಫಲಾನುಭವಿಗಳು ಕೊಳೆತ ಆಹಾರವನ್ನು ಕೇಂದ್ರದಲ್ಲೇ ಬೀಸಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.</p>.<p>ಕೇಂದ್ರದಲ್ಲಿನ ಅವ್ಯವಸ್ಥೆ ಗಮನಿಸಿದ ಸಿಡಿಪಿಒ ಕುಂಬಾರ ಅವರು ಕಾರ್ಯಕರ್ತೆ ರುದ್ರಮ್ಮ ಕೋಟಿ ಹಾಗೂ ಭಾರತಿ ಬೂದಿಹಾಳ ಅವರ ಮೇಲೆ ಗರಂ ಆದರು. ಕಳೆದ ಹಲವು ವರ್ಷಗಳಿಂದಲೂ ಈ ಕೇಂದ್ರದಲ್ಲಿ ಇಬ್ಬರ ಮದ್ಯೆ ಹೊಂದಾಣಿಕೆಯ ಕೊರತೆಯಲ್ಲಿ ಆಹಾರ ಮೊಟ್ಟೆ ಮೂಲೆಗುಂಪಾಗಿವೆ, ಮಕ್ಕಳಿಗೆ ಕಳಪೆ ಊಟ ಸಿದ್ಧಪಡಿಸಲಾಗುತ್ತಿದೆ, ಅಡುಗೆ ಕುಕ್ಕರ್ 3 ವರ್ಷಗಳಿಂದಲೂ ದುರಸ್ತಿ ಕಂಡಿಲ್ಲ. ಈ ಕುರಿತು ಶೀಘ್ರವೇ ನನಗೆ ಮಾಹಿತಿ ಸಂಗ್ರಹಿಸಿ ಕಾರ್ಯಕರ್ತೆ ಹಾಗೂ ಸಹಾಯಕಿಗೆ ನೋಟಿಸ್ ನೀಡಿ ಕಾರಣ ಕೇಳಿ ಎಂದು ಸ್ಥಳದಲ್ಲಿದ್ದ ಹಿರಿಯ ಮೇಲ್ವೀಚಾರಕಿ ಪಾರ್ವತಿ ಕಾಗಲ್ ಹಾಗೂ ಮೇಲ್ವಿಚಾರಕಿ ಶಕುಂತಲಾ ದೇಸಾಯಿ ಅವರಿಗೆ ಸೂಚಿಸಿದರು.</p>.<p> ‘ನಾಡಗೌಡ್ರ ಓಣಿಯ 4ನೇ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹಾಗೂ ಸಹಾಯಕಿ ಮಧ್ಯೆ ಹಲವು ದಿನಗಳಿಂದ ಸಹಕಾರದ ಕೊರತೆ ಕಂಡು ಬಂದಿದೆ. ಈಗಾಗಿ ಕೇಂದ್ರದಲ್ಲಿ ಆಹಾರ ಮೊಟ್ಟೆ ಇತರೇ ಸಾಮಗ್ರಿಗಳನ್ನು ಮಾರಿಕೊಂಡಿದ್ದಾರೆ ಎನ್ನುವ ಆರೋಪವಿದೆ, ಈ ಕುರಿತು ನೋಟಿಸ್ ನೀಡುತ್ತೇನೆ ಹಾಗೂ ಇಬ್ಬರಲ್ಲಿ ಒಬ್ಬರನ್ನು ಬೇರೆ ಕೇಂದ್ರಕ್ಕೆ ಎತ್ತಂಗಡಗೆ ಶಿಫಾರಸು ಮಾಡುತ್ತೇನೆ’ ಎಂದು <br> ಮುದ್ದೇಬಿಹಾಳ ಸಿಡಿಪಿಒ ಶಿವಮೂರ್ತಿ ಕುಂಬಾರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>