<p><strong>ವಿಜಯಪುರ: </strong>ಬೈಕಿನಲ್ಲಿ ಹೋಗುತ್ತಿದ್ದವರನ್ನು ಕಡ್ಡಗಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ ಅವರ ಬಳಿ ಇದ್ದ ಹಣ, ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದ ಆಲಮೇಲದ ಮೂವರು ದರೋಡೆಕೋರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಆಲಮೇಲದ ರಫೀಕ್ ಮನಗೂಳಿ(20), ರಾಜಾ ಸೌದಾಗರ(19), ಮಹಿಬೂಬ ಸೌದಾಗರ(20) ಅವರನ್ನು ಪೊಲೀಸರುವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ₹ 25 ಸಾವಿರ ನಗದು ಮತ್ತು ಎರಡು ಮೊಬೈಲ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಎರಡು ಬೈಕ್, ಒಂದು ಖಾರದಪುಡಿ ಚೀಲವನ್ನು ವಶಪಡಿಸಿಕೊಂಡಿದ್ದಾರೆ.</p>.<p>ಕಕ್ಕಳಮೇಲಿ ನಿವಾಸಿ ಸಿದ್ಧಪ್ಪ ಬಳಬಟ್ಟಿ ಆಗಸ್ಟ್ 7ರಂದು ರಾತ್ರಿ 10.45ಕ್ಕೆ ವಿಭೂತಿಹಳ್ಳಿ ಕಡೆಯಿಂದ ತೋಂಟಾಪುರಕ್ಕೆ ಬೈಕ್ನಲ್ಲಿ ಹೊರಟಿದ್ದಾಗ, ಮೂರು ಬೈಕುಗಳಲ್ಲಿ ಹಿಂಬಾಲಿಸಿದ ದರೋಡೆಕೋರರು, ಬೈಕ್ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ಅವರ ಬಳಿ ಇದ್ದ ₹ 25 ಸಾವಿರ ನಗದು, ಮೊಬೈಲ್ ಫೋನ್ ಕಸಿದಿಕೊಂಡು ಪರಾರಿಯಾಗಿದ್ದರು.</p>.<p>ಅದೇ ರೀತಿ ರಾಮನಹಳ್ಳಿಯ ರಮೇಶ ಹಳೆಮನಿ ಅವರು ಬೈಕ್ನಲ್ಲಿ ತಮ್ಮೂರಿಗೆ ಹೋಗುವಾಗ ಅಡ್ಡಗಟ್ಟಿದ ದರೋಡೆಕೋರರು, ಅವರ ಕಣ್ಣಿಗೂ ಖಾರದ ಪುಡಿ ಎರಚಿ ಅವರ ಬಳಿ ಇದ್ದ ₹7 ಸಾವಿರ ನಗದು ಮತ್ತು ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದರು.</p>.<p>ಇಂಡಿ ಉಪವಿಭಾಗದ ಡಿಎಸ್ಪಿ ಟಿ.ಎಸ್.ಸುಲ್ಪಿ ನೇತೃತ್ವದಲ್ಲಿ ದರೋಡೆಕೋರರ ಪತ್ತೆಗೆರಚನೆ ಮಾಡಲಾಗಿದ್ದ ತನಿಖಾ ತಂಡವು ಗುರುವಾರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಸಿಂದಗಿ ಸಿಪಿಐ ಸತೀಶಕುಮಾರ ಎಸ್.ಕಾಂಬಳೆ,ಆಲಮೇಲಪಿಎಸ್ಐ ನಿಂಗಪ್ಪ ಎಚ್.ಪೂಜೇರಿ, ಸಿಬ್ಬಂದಿಗಳಾದ ಎಲ್.ಯು.ನಧಾಪ, ಎಂ.ಜಿ.ಪಾಟೀಲ, ಎನ್.ಆರ್.ಚೌಧರಿ, ಎಸ್.ಎಲ್.ತೆನ್ನಿಹಳ್ಳಿ, ರಾಜು ರಾಠೋಡ, ಎಸ್.ಕೆ.ಕಲ್ಲೂರ, ಎಂ.ಎಸ್.ಗೊರನಾಳ, ಎಸ್.ಎಚ್.ಇಂಡಿ, ಎಸ್.ಬಿ.ದಿಂಡವಾರ, ಪ್ರಕಾಶ ಮೈದರಗಿ, ಎಸ್.ಎಸ್.ಬಾಪಗೊಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಬೈಕಿನಲ್ಲಿ ಹೋಗುತ್ತಿದ್ದವರನ್ನು ಕಡ್ಡಗಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ ಅವರ ಬಳಿ ಇದ್ದ ಹಣ, ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದ ಆಲಮೇಲದ ಮೂವರು ದರೋಡೆಕೋರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಆಲಮೇಲದ ರಫೀಕ್ ಮನಗೂಳಿ(20), ರಾಜಾ ಸೌದಾಗರ(19), ಮಹಿಬೂಬ ಸೌದಾಗರ(20) ಅವರನ್ನು ಪೊಲೀಸರುವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ₹ 25 ಸಾವಿರ ನಗದು ಮತ್ತು ಎರಡು ಮೊಬೈಲ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಎರಡು ಬೈಕ್, ಒಂದು ಖಾರದಪುಡಿ ಚೀಲವನ್ನು ವಶಪಡಿಸಿಕೊಂಡಿದ್ದಾರೆ.</p>.<p>ಕಕ್ಕಳಮೇಲಿ ನಿವಾಸಿ ಸಿದ್ಧಪ್ಪ ಬಳಬಟ್ಟಿ ಆಗಸ್ಟ್ 7ರಂದು ರಾತ್ರಿ 10.45ಕ್ಕೆ ವಿಭೂತಿಹಳ್ಳಿ ಕಡೆಯಿಂದ ತೋಂಟಾಪುರಕ್ಕೆ ಬೈಕ್ನಲ್ಲಿ ಹೊರಟಿದ್ದಾಗ, ಮೂರು ಬೈಕುಗಳಲ್ಲಿ ಹಿಂಬಾಲಿಸಿದ ದರೋಡೆಕೋರರು, ಬೈಕ್ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ಅವರ ಬಳಿ ಇದ್ದ ₹ 25 ಸಾವಿರ ನಗದು, ಮೊಬೈಲ್ ಫೋನ್ ಕಸಿದಿಕೊಂಡು ಪರಾರಿಯಾಗಿದ್ದರು.</p>.<p>ಅದೇ ರೀತಿ ರಾಮನಹಳ್ಳಿಯ ರಮೇಶ ಹಳೆಮನಿ ಅವರು ಬೈಕ್ನಲ್ಲಿ ತಮ್ಮೂರಿಗೆ ಹೋಗುವಾಗ ಅಡ್ಡಗಟ್ಟಿದ ದರೋಡೆಕೋರರು, ಅವರ ಕಣ್ಣಿಗೂ ಖಾರದ ಪುಡಿ ಎರಚಿ ಅವರ ಬಳಿ ಇದ್ದ ₹7 ಸಾವಿರ ನಗದು ಮತ್ತು ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದರು.</p>.<p>ಇಂಡಿ ಉಪವಿಭಾಗದ ಡಿಎಸ್ಪಿ ಟಿ.ಎಸ್.ಸುಲ್ಪಿ ನೇತೃತ್ವದಲ್ಲಿ ದರೋಡೆಕೋರರ ಪತ್ತೆಗೆರಚನೆ ಮಾಡಲಾಗಿದ್ದ ತನಿಖಾ ತಂಡವು ಗುರುವಾರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಸಿಂದಗಿ ಸಿಪಿಐ ಸತೀಶಕುಮಾರ ಎಸ್.ಕಾಂಬಳೆ,ಆಲಮೇಲಪಿಎಸ್ಐ ನಿಂಗಪ್ಪ ಎಚ್.ಪೂಜೇರಿ, ಸಿಬ್ಬಂದಿಗಳಾದ ಎಲ್.ಯು.ನಧಾಪ, ಎಂ.ಜಿ.ಪಾಟೀಲ, ಎನ್.ಆರ್.ಚೌಧರಿ, ಎಸ್.ಎಲ್.ತೆನ್ನಿಹಳ್ಳಿ, ರಾಜು ರಾಠೋಡ, ಎಸ್.ಕೆ.ಕಲ್ಲೂರ, ಎಂ.ಎಸ್.ಗೊರನಾಳ, ಎಸ್.ಎಚ್.ಇಂಡಿ, ಎಸ್.ಬಿ.ದಿಂಡವಾರ, ಪ್ರಕಾಶ ಮೈದರಗಿ, ಎಸ್.ಎಸ್.ಬಾಪಗೊಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>