<p><strong>ವಿಜಯಪುರ</strong>: ನಗರದ ವಿವಿಧೆಡೆ ನಡೆದಿದ್ದ ಮನೆಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಬಾಲಪರಾಧಿ ಸೇರಿದಂತೆ ಮೂವರನ್ನು ಜಲನಗರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.</p>.<p>ಗಣೇಶನಗರದ ಗೋಬಿ ಮಂಚೂರಿ ವ್ಯಾಪಾರಿ ಕಿರಣ ಶರ್ಮಾ(19), ರೈಲು ನಿಲ್ದಾಣದ ಹತ್ತಿರದ ಆಟೊರಿಕ್ಷಾ ಚಾಲಕ ವಿರೇಶ ಬಂಥನಾಳ(19) ಮತ್ತು ಬಾಲಪರಾಧಿ ಬಂಧಿತರಾಗಿದ್ದಾರೆ.</p>.<p>ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ 190 ಗ್ರಾಂ ಬಂಗಾರದ ಆಭರಣ, 145 ಗ್ರಾಂ ಬೆಳ್ಳಿ ಆಭರಣ ಹಾಗೂ ₹ 1.50 ಲಕ್ಷ ನಗದು ಹಾಗೂ ಒಂದು ಲ್ಯಾಪ್ಟಾಪ್, ಕ್ಯಾಮೆರಾ ಹಾಗೂ ಕೃತ್ಯಕ್ಕೆ ಬಳಸಿದ ಆಟೊ ರಿಕ್ಷಾ ಸೇರಿದಂತೆ ಒಟ್ಟು ₹ 12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.</p>.<p>ಗೋಳಗುಮ್ಮಟ ಸಿಪಿಐ ಬಿ.ಕೆ.ಮೂಕರ್ತಿಹಾಳ, ಜಲನಗರ ಪಿಎಸ್ಐ ಬಿ.ಎನ್.ಝೀಂಗಾಡೆ, ಸಿಬ್ಬಂದಿಗಳಾದ ಬಿ.ಎಂ.ಪವಾರ, ಬಿ.ಟಿ.ಹೊಸಮನಿ, ಎಸ್.ಎಚ್.ನಾಯಕ, ಪಿ.ಎಸ್.ಬಿರಾದಾರ, ಎಲ್.ಎಂ.ಬಿರಾದಾರ, ಎಸ್.ಎಂ.ನಂದೇಶ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ನಗರದ ವಿವಿಧೆಡೆ ನಡೆದಿದ್ದ ಮನೆಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಬಾಲಪರಾಧಿ ಸೇರಿದಂತೆ ಮೂವರನ್ನು ಜಲನಗರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.</p>.<p>ಗಣೇಶನಗರದ ಗೋಬಿ ಮಂಚೂರಿ ವ್ಯಾಪಾರಿ ಕಿರಣ ಶರ್ಮಾ(19), ರೈಲು ನಿಲ್ದಾಣದ ಹತ್ತಿರದ ಆಟೊರಿಕ್ಷಾ ಚಾಲಕ ವಿರೇಶ ಬಂಥನಾಳ(19) ಮತ್ತು ಬಾಲಪರಾಧಿ ಬಂಧಿತರಾಗಿದ್ದಾರೆ.</p>.<p>ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ 190 ಗ್ರಾಂ ಬಂಗಾರದ ಆಭರಣ, 145 ಗ್ರಾಂ ಬೆಳ್ಳಿ ಆಭರಣ ಹಾಗೂ ₹ 1.50 ಲಕ್ಷ ನಗದು ಹಾಗೂ ಒಂದು ಲ್ಯಾಪ್ಟಾಪ್, ಕ್ಯಾಮೆರಾ ಹಾಗೂ ಕೃತ್ಯಕ್ಕೆ ಬಳಸಿದ ಆಟೊ ರಿಕ್ಷಾ ಸೇರಿದಂತೆ ಒಟ್ಟು ₹ 12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.</p>.<p>ಗೋಳಗುಮ್ಮಟ ಸಿಪಿಐ ಬಿ.ಕೆ.ಮೂಕರ್ತಿಹಾಳ, ಜಲನಗರ ಪಿಎಸ್ಐ ಬಿ.ಎನ್.ಝೀಂಗಾಡೆ, ಸಿಬ್ಬಂದಿಗಳಾದ ಬಿ.ಎಂ.ಪವಾರ, ಬಿ.ಟಿ.ಹೊಸಮನಿ, ಎಸ್.ಎಚ್.ನಾಯಕ, ಪಿ.ಎಸ್.ಬಿರಾದಾರ, ಎಲ್.ಎಂ.ಬಿರಾದಾರ, ಎಸ್.ಎಂ.ನಂದೇಶ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>