ವಿಜಯಪುರ: ನಗರದ ವಿವಿಧೆಡೆ ನಡೆದಿದ್ದ ಮನೆಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಬಾಲಪರಾಧಿ ಸೇರಿದಂತೆ ಮೂವರನ್ನು ಜಲನಗರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಗಣೇಶನಗರದ ಗೋಬಿ ಮಂಚೂರಿ ವ್ಯಾಪಾರಿ ಕಿರಣ ಶರ್ಮಾ(19), ರೈಲು ನಿಲ್ದಾಣದ ಹತ್ತಿರದ ಆಟೊರಿಕ್ಷಾ ಚಾಲಕ ವಿರೇಶ ಬಂಥನಾಳ(19) ಮತ್ತು ಬಾಲಪರಾಧಿ ಬಂಧಿತರಾಗಿದ್ದಾರೆ.
ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ 190 ಗ್ರಾಂ ಬಂಗಾರದ ಆಭರಣ, 145 ಗ್ರಾಂ ಬೆಳ್ಳಿ ಆಭರಣ ಹಾಗೂ ₹ 1.50 ಲಕ್ಷ ನಗದು ಹಾಗೂ ಒಂದು ಲ್ಯಾಪ್ಟಾಪ್, ಕ್ಯಾಮೆರಾ ಹಾಗೂ ಕೃತ್ಯಕ್ಕೆ ಬಳಸಿದ ಆಟೊ ರಿಕ್ಷಾ ಸೇರಿದಂತೆ ಒಟ್ಟು ₹ 12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.