ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಬಾಲಪರಾಧಿ ಸೇರಿದಂತೆ ಮೂವರು ಮನೆಗಳ್ಳರ ಬಂಧನ

Last Updated 21 ಆಗಸ್ಟ್ 2020, 14:57 IST
ಅಕ್ಷರ ಗಾತ್ರ

ವಿಜಯಪುರ: ನಗರದ ವಿವಿಧೆಡೆ ನಡೆದಿದ್ದ ಮನೆಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಬಾಲಪರಾಧಿ ಸೇರಿದಂತೆ ಮೂವರನ್ನು ಜಲನಗರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಗಣೇಶನಗರದ ಗೋಬಿ ಮಂಚೂರಿ ವ್ಯಾಪಾರಿ ಕಿರಣ ಶರ್ಮಾ(19), ರೈಲು ನಿಲ್ದಾಣದ ಹತ್ತಿರದ ಆಟೊರಿಕ್ಷಾ ಚಾಲಕ ವಿರೇಶ ಬಂಥನಾಳ(19) ಮತ್ತು ಬಾಲಪರಾಧಿ ಬಂಧಿತರಾಗಿದ್ದಾರೆ.

ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ 190 ಗ್ರಾಂ ಬಂಗಾರದ ಆಭರಣ, 145 ಗ್ರಾಂ ಬೆಳ್ಳಿ ಆಭರಣ ಹಾಗೂ ₹ 1.50 ಲಕ್ಷ ನಗದು ಹಾಗೂ ಒಂದು ಲ್ಯಾಪ್‌ಟಾಪ್‌, ಕ್ಯಾಮೆರಾ ಹಾಗೂ ಕೃತ್ಯಕ್ಕೆ ಬಳಸಿದ ಆಟೊ ರಿಕ್ಷಾ ಸೇರಿದಂತೆ ಒಟ್ಟು ₹ 12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ಗೋಳಗುಮ್ಮಟ ಸಿಪಿಐ ಬಿ.ಕೆ.ಮೂಕರ್ತಿಹಾಳ, ಜಲನಗರ ಪಿಎಸ್‌ಐ ಬಿ.ಎನ್‌.ಝೀಂಗಾಡೆ, ಸಿಬ್ಬಂದಿಗಳಾದ ಬಿ.ಎಂ.ಪವಾರ, ಬಿ.ಟಿ.ಹೊಸಮನಿ, ಎಸ್.‌ಎಚ್‌.ನಾಯಕ, ಪಿ.ಎಸ್‌.ಬಿರಾದಾರ, ಎಲ್‌.ಎಂ.ಬಿರಾದಾರ, ಎಸ್‌.ಎಂ.ನಂದೇಶ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT