<p><strong>ಆಲಮಟ್ಟಿ</strong>: ಸಮೀಪದ ಚಿಮ್ಮಲಗಿ ಭಾಗ-1 ಎ ಗ್ರಾಮದಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮಂತ (ರಾಮನ ಪರಿವಾರ)ನ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ಜರುಗಿತು.</p><p>12 ನೇ ಶತಮಾನದಿಂದಲೂ ಗ್ರಾಮದಲ್ಲಿನ ಚಿಮ್ಮಲಗಿ ಆಚಾರ್ಯರ ಮನೆತನದಿಂದ ಪೂಜಿಸಲ್ಪಡುತ್ತಿರುವ ಈ ರಾಮ ಪರಿವಾರದ ಮೂರ್ತಿಗಳು ಈಚೆಗೆ ಭಿನ್ನವಾಗಿದ್ದವು. ಅದಕ್ಕಾಗಿ ದೇವಸ್ಥಾನವನ್ನು ಪುನರ್ ನವೀಕರಣಗೊಳಿಸಿ, ಹೊಸದಾಗಿ ಮೈಸೂರಿನ ಖ್ಯಾತ ಶಿಲ್ಪಿ (ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತಿದ) ಅರುಣ ಯೋಗಿರಾಜ್ ಅವರ ಕೈಯಲ್ಲಿ ಈ ಮೂರ್ತಿಗಳನ್ನು ಕೆತ್ತಿಸಿ ತರಲಾಗಿತ್ತು. ಎರಡೂವರೆ ಅಡಿ ಎತ್ತರದ ಈ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸಾಂಪ್ರದಾಯಿಕವಾಗಿ, ವಿವಿಧ ಹೋಮ, ಹವನ, ಪೂಜೆಗಳ ಮಧ್ಯೆ ಎರಡು ದಿನಗಳ ಕಾಲ ವಿಜ್ರಂಭಣೆಯಿಂದ ಜರುಗಿತು.</p><p>ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. <br>ವಿದ್ಯಾಧೀಶಾಚಾರ್ಯ ಗುತ್ತಲ, ಪಂಡಿತ ಸಂಜೀವಾಚಾರ್ಯ ಮದಬಾವಿ, ಜಯಪ್ರಕಾಶ ಆಚಾರ್ಯ ಚಿಮ್ಮಲಗಿ, ಮತ್ತೀತರರ ಗುರು ಬಳಗ ವಿವಿಧ ಪೂಜಾ, ಹೋಮ ಕಾರ್ಯಕ್ರಮಗಳನ್ನು ನಿರ್ವಹಿಸಿದರು.</p><p>ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮಾತನಾಡಿ, ರಾಮನಾಮ ಜಪವು ಮನಸ್ಸಿನ ಶಾಂತಿ, ಏಕಾಗ್ರತೆ, ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವ ಅತ್ಯಂತ ಪ್ರಭಾವಶಾಲಿ ಸಾಧನೆಯಾಗಿದೆ ಎಂದರು.</p><p>ಜಯಪ್ರಕಾಶ ಆಚಾರ್ಯ ಚಿಮ್ಮಲಗಿ ಮಾತನಾಡಿದರು. ವಿದ್ಯಾಸಿಂಹಾಚಾರ್ಯರು, ಮದ್ವಾಚಾರ್ಯ ಮೊಕಾಶಿ, ಸತ್ಯಧಾನಾಚಾರ್ಯ ಕಟ್ಟಿ, ವಿಶ್ವಪ್ರಜ್ಞಾಚಾರ್ಯ ಮಾಹುಲಿ, ಶ್ಯಾಮಾಚಾರ್ಯ ಚಿಮ್ಮಲಗಿ ಮತ್ತಿತರರು ಇದ್ದರು.</p>
<p><strong>ಆಲಮಟ್ಟಿ</strong>: ಸಮೀಪದ ಚಿಮ್ಮಲಗಿ ಭಾಗ-1 ಎ ಗ್ರಾಮದಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮಂತ (ರಾಮನ ಪರಿವಾರ)ನ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ಜರುಗಿತು.</p><p>12 ನೇ ಶತಮಾನದಿಂದಲೂ ಗ್ರಾಮದಲ್ಲಿನ ಚಿಮ್ಮಲಗಿ ಆಚಾರ್ಯರ ಮನೆತನದಿಂದ ಪೂಜಿಸಲ್ಪಡುತ್ತಿರುವ ಈ ರಾಮ ಪರಿವಾರದ ಮೂರ್ತಿಗಳು ಈಚೆಗೆ ಭಿನ್ನವಾಗಿದ್ದವು. ಅದಕ್ಕಾಗಿ ದೇವಸ್ಥಾನವನ್ನು ಪುನರ್ ನವೀಕರಣಗೊಳಿಸಿ, ಹೊಸದಾಗಿ ಮೈಸೂರಿನ ಖ್ಯಾತ ಶಿಲ್ಪಿ (ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತಿದ) ಅರುಣ ಯೋಗಿರಾಜ್ ಅವರ ಕೈಯಲ್ಲಿ ಈ ಮೂರ್ತಿಗಳನ್ನು ಕೆತ್ತಿಸಿ ತರಲಾಗಿತ್ತು. ಎರಡೂವರೆ ಅಡಿ ಎತ್ತರದ ಈ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸಾಂಪ್ರದಾಯಿಕವಾಗಿ, ವಿವಿಧ ಹೋಮ, ಹವನ, ಪೂಜೆಗಳ ಮಧ್ಯೆ ಎರಡು ದಿನಗಳ ಕಾಲ ವಿಜ್ರಂಭಣೆಯಿಂದ ಜರುಗಿತು.</p><p>ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. <br>ವಿದ್ಯಾಧೀಶಾಚಾರ್ಯ ಗುತ್ತಲ, ಪಂಡಿತ ಸಂಜೀವಾಚಾರ್ಯ ಮದಬಾವಿ, ಜಯಪ್ರಕಾಶ ಆಚಾರ್ಯ ಚಿಮ್ಮಲಗಿ, ಮತ್ತೀತರರ ಗುರು ಬಳಗ ವಿವಿಧ ಪೂಜಾ, ಹೋಮ ಕಾರ್ಯಕ್ರಮಗಳನ್ನು ನಿರ್ವಹಿಸಿದರು.</p><p>ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮಾತನಾಡಿ, ರಾಮನಾಮ ಜಪವು ಮನಸ್ಸಿನ ಶಾಂತಿ, ಏಕಾಗ್ರತೆ, ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವ ಅತ್ಯಂತ ಪ್ರಭಾವಶಾಲಿ ಸಾಧನೆಯಾಗಿದೆ ಎಂದರು.</p><p>ಜಯಪ್ರಕಾಶ ಆಚಾರ್ಯ ಚಿಮ್ಮಲಗಿ ಮಾತನಾಡಿದರು. ವಿದ್ಯಾಸಿಂಹಾಚಾರ್ಯರು, ಮದ್ವಾಚಾರ್ಯ ಮೊಕಾಶಿ, ಸತ್ಯಧಾನಾಚಾರ್ಯ ಕಟ್ಟಿ, ವಿಶ್ವಪ್ರಜ್ಞಾಚಾರ್ಯ ಮಾಹುಲಿ, ಶ್ಯಾಮಾಚಾರ್ಯ ಚಿಮ್ಮಲಗಿ ಮತ್ತಿತರರು ಇದ್ದರು.</p>