ಯುವಕನ ಆರೋಪ: ‘ಗ್ರಾಮದಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ನಾನೇ ಫೋನ್ ಮಾಡಿ ತಿಳಿಸಿದ್ದೆ. ಆದರೆ, ಇಂಡಿ ಗ್ರಾಮೀಣ ಠಾಣೆ ಪಿಎಸ್ಐ ಮಾಳಪ್ಪ ಪೂಜಾರಿ ಹಾಗೂ ಬೀಟ್ ಪೊಲೀಸ್ ಮಹೇಶ ಪವಾರ ಎಂಬುವವರು ನನ್ನನ್ನೇ ಠಾಣೆಗೆ ಕರೆದೊಯ್ದು ಬಾಯಿಗೆ ಬೂಟು ಇಟ್ಟು, ಹಿಗ್ಗಾಮುಗ್ಗ ಥಳಿಸಿದರು. ಬಳಿಕರಾತ್ರಿ 11ರ ಸುಮಾರಿಗೆ ಖಾಸಗಿ ವಾಹನದಲ್ಲಿ ಕರೆತಂದು ಗ್ರಾಮದ ಹೊರವಲಯದಲ್ಲಿ ಚರಂಡಿಗೆ ಎಸೆದು ಹೋಗಿದ್ದಾರೆ’ ಎಂದು ಯುವಕ ಸಂತೋಷ ನಂದ್ಯಾಳ ಆರೋಪಿಸಿದ್ದಾರೆ.