ತಾಳಿಕೋಟೆ: ಸ್ಥಳೀಯ ವೀರಶೈವ ವಿದ್ಯಾವರ್ಧಕ ಸಂಘದ ಎಸ್.ಕೆ.ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪುರುಷರ ತಂಡವು ಮೂಡಲಗಿಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಬಾಲ್ ಬ್ಯಾಡ್ಮಿಟನ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿಜಯಪುರದಲ್ಲಿ ನಡೆದ ಏಕವಲಯ ಬಾಲ್ ಬ್ಯಾಡ್ಮಿಟನ್ ಪಂದ್ಯಾವಳಿಯಲ್ಲಿ ಮಹಿಳೆಯರ ತಂಡ ತೃತೀಯ ಸ್ಥಾನ ಪಡೆದಿದೆ.
ಪುರುಷರ ತಂಡದಲ್ಲಿ ದೇವರಾಜ ಅಂಬರೀಶ ಬಾರಕೇರ್, ಪ್ರಶಾಂತ ಅಶೋಕ ಮೂಕಿಹಾಳ ಹಾಗೂ ಮಹಿಳೆಯರ ತಂಡದಲ್ಲಿ ಸೌಮ್ಯಾ ಸೋಮಶೇಖರ ಪಾಟೀಲ, ಅನುಷಾ ಶಿವಾನಂದ ಲಿಂಗದಳ್ಳಿ, ರಂಜಿತಾ ಸೋಮನಗೌಡ ಪಾಟೀಲ ,ಲಕ್ಷ್ಮಿ ಮಲ್ಲನಗೌಡ ವನಕ್ಯಾಳ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.