<p><strong>ಬಸವನಬಾಗೇವಾಡಿ:</strong> ತಾಲ್ಲೂಕಿನ ನಂದಿಹಾಳ ಪಿಎಚ್ ಗ್ರಾಮವು ಶ್ರೀಗುರು ಆರೂಢರ ಐಕ್ಯ ಕ್ಷೇತ್ರವಾಗಿದೆ. ಭಕ್ತರ ಮನವಿಯಂತೆ ಸರ್ಕಾರ ಈ ಗ್ರಾಮಕ್ಕೆ ನಂದಿಹಾಳ ಪಿಎಚ್ ಬದಲಾಗಿ ಆರೂಢ ನಂದಿಹಾಳ ಎಂದು ನಾಮಕರಣ ಮಾಡಿ ಅಧಿಕೃತ ಆದೇಶ ಹೊರಡಿಸಿದೆ ಎಂದು ತಹಶೀಲ್ದಾರ್ ವೈ. ಎಸ್.ಸೋಮನಕಟ್ಟಿ ಹೇಳಿದರು.</p>.<p>ತಾಲ್ಲೂಕಿನ ಆರೂಢನಂದಿಹಾಳ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಗುರು ಆರೂಢರ 116ನೇ ಜಯಂತ್ಯುತ್ಸವ ಹಾಗೂ ಗ್ರಾಮಕ್ಕೆ ಆರೂಢನಂದಿಹಾಳ ನಾಮಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಜಗತ್ತಿನಲ್ಲಿ ಒಳಿತು ಮಾಡಿದವರು ಮಾತ್ರ ಆರೂಢರಂತೆ ಮಹಾನ್ ಶರಣರಾಗಲು ಸಾಧ್ಯ ಎಂದು ಹೇಳಿದರು.</p>.<p>ಕಡಕೋಳದ ರಾಜಗುರು ಮಹಾಲಿಂಗ ಸ್ವಾಮೀಜಿ ಮಾತನಾಡಿ, ಆರೂಢರ ಕೃಪೆಯಿಂದ ಇಂದು ಅಡವಿ ನಂದಿಹಾಳ ಹೋಗಿ ಆರೂಢನಂದಿಹಾಳವಾಗಿದೆ. ಒಂದೇ ಜನ್ಮದಲ್ಲಿ ಸಪ್ತಭೂಮಿಕೆಗಳನ್ನು ಸಾಧಿಸಿದವರು ಆರೂಢರು ಮಾತ್ರ ಎಂದು ಹೇಳಿದರು.</p>.<p>ಅರಟಾಳದ ಸಿದ್ದಾರೂಢ ಮಠದ ಶಿವಪುತ್ರ ಶರಣರು, ಚಿಕ್ಕರೂಗಿಯ ಈರಣ್ಣ ಶಾಸ್ತ್ರಿ, ಹುಣಶ್ಯಾಳ ಪಿಬಿಯ ಶಂಕ್ರಣ ಆಲೂರ, ಶ್ರೀಗುರು ಆರೂಢರ ದೇವಸ್ಥಾನ ಕಮಿಟಿ ಅಧ್ಯಕ್ಷ ಶ್ರೀಶೈಲ ಕನ್ನೂರ ಮಾತನಾಡಿದರು.</p>.<p>ಶಾಂತಯ್ಯ ಹಿರೇಮಠ, ಬಮ್ಮಯ್ಯ ಹಿರೇಮಠ, ರಾಮಚಂದ್ರ ಸಾಸನೂರ, ಖಾಸ್ಗತ ಸಜ್ಜನ, ಬಸಯ್ಯ ಹಿರೇಮಠ, ಕೆಂಚು ವಾಲೀಕಾರ, ಇರಗಂಟೆಪ್ಪ ಸಜ್ಜನ, ಗುರುನಾಥ ಸಜ್ಜನ, ಸಿದ್ದಾರೂಢ ಮದರಿ, ಶಾಂತು ಕನ್ನೂರ ಇದ್ದರು.</p>.<p>ಗ್ರಾಮದ ಬಸ್ ನಿಲ್ದಾಣದ ಹತ್ತಿರ ಆರೂಢನಂದಿಹಾಳ ಎಂಬ ಗ್ರಾಮದ ನಾಮಫಲಕವನ್ನು ತಹಶೀಲ್ದಾರ್ ವೈ. ಎಸ್.ಸೋಮನಕಟ್ಟಿ ಅನಾವರಣಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವನಬಾಗೇವಾಡಿ:</strong> ತಾಲ್ಲೂಕಿನ ನಂದಿಹಾಳ ಪಿಎಚ್ ಗ್ರಾಮವು ಶ್ರೀಗುರು ಆರೂಢರ ಐಕ್ಯ ಕ್ಷೇತ್ರವಾಗಿದೆ. ಭಕ್ತರ ಮನವಿಯಂತೆ ಸರ್ಕಾರ ಈ ಗ್ರಾಮಕ್ಕೆ ನಂದಿಹಾಳ ಪಿಎಚ್ ಬದಲಾಗಿ ಆರೂಢ ನಂದಿಹಾಳ ಎಂದು ನಾಮಕರಣ ಮಾಡಿ ಅಧಿಕೃತ ಆದೇಶ ಹೊರಡಿಸಿದೆ ಎಂದು ತಹಶೀಲ್ದಾರ್ ವೈ. ಎಸ್.ಸೋಮನಕಟ್ಟಿ ಹೇಳಿದರು.</p>.<p>ತಾಲ್ಲೂಕಿನ ಆರೂಢನಂದಿಹಾಳ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಗುರು ಆರೂಢರ 116ನೇ ಜಯಂತ್ಯುತ್ಸವ ಹಾಗೂ ಗ್ರಾಮಕ್ಕೆ ಆರೂಢನಂದಿಹಾಳ ನಾಮಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಜಗತ್ತಿನಲ್ಲಿ ಒಳಿತು ಮಾಡಿದವರು ಮಾತ್ರ ಆರೂಢರಂತೆ ಮಹಾನ್ ಶರಣರಾಗಲು ಸಾಧ್ಯ ಎಂದು ಹೇಳಿದರು.</p>.<p>ಕಡಕೋಳದ ರಾಜಗುರು ಮಹಾಲಿಂಗ ಸ್ವಾಮೀಜಿ ಮಾತನಾಡಿ, ಆರೂಢರ ಕೃಪೆಯಿಂದ ಇಂದು ಅಡವಿ ನಂದಿಹಾಳ ಹೋಗಿ ಆರೂಢನಂದಿಹಾಳವಾಗಿದೆ. ಒಂದೇ ಜನ್ಮದಲ್ಲಿ ಸಪ್ತಭೂಮಿಕೆಗಳನ್ನು ಸಾಧಿಸಿದವರು ಆರೂಢರು ಮಾತ್ರ ಎಂದು ಹೇಳಿದರು.</p>.<p>ಅರಟಾಳದ ಸಿದ್ದಾರೂಢ ಮಠದ ಶಿವಪುತ್ರ ಶರಣರು, ಚಿಕ್ಕರೂಗಿಯ ಈರಣ್ಣ ಶಾಸ್ತ್ರಿ, ಹುಣಶ್ಯಾಳ ಪಿಬಿಯ ಶಂಕ್ರಣ ಆಲೂರ, ಶ್ರೀಗುರು ಆರೂಢರ ದೇವಸ್ಥಾನ ಕಮಿಟಿ ಅಧ್ಯಕ್ಷ ಶ್ರೀಶೈಲ ಕನ್ನೂರ ಮಾತನಾಡಿದರು.</p>.<p>ಶಾಂತಯ್ಯ ಹಿರೇಮಠ, ಬಮ್ಮಯ್ಯ ಹಿರೇಮಠ, ರಾಮಚಂದ್ರ ಸಾಸನೂರ, ಖಾಸ್ಗತ ಸಜ್ಜನ, ಬಸಯ್ಯ ಹಿರೇಮಠ, ಕೆಂಚು ವಾಲೀಕಾರ, ಇರಗಂಟೆಪ್ಪ ಸಜ್ಜನ, ಗುರುನಾಥ ಸಜ್ಜನ, ಸಿದ್ದಾರೂಢ ಮದರಿ, ಶಾಂತು ಕನ್ನೂರ ಇದ್ದರು.</p>.<p>ಗ್ರಾಮದ ಬಸ್ ನಿಲ್ದಾಣದ ಹತ್ತಿರ ಆರೂಢನಂದಿಹಾಳ ಎಂಬ ಗ್ರಾಮದ ನಾಮಫಲಕವನ್ನು ತಹಶೀಲ್ದಾರ್ ವೈ. ಎಸ್.ಸೋಮನಕಟ್ಟಿ ಅನಾವರಣಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>