‘ಬೊಮ್ಮಾಯಿ ವಲಸಿಗರು’ ಎಂದು ಬದಲಾವಣೆ ಮಾತನಾಡುವದು ತಪ್ಪು. ಅವರೊಂದಿಗೆ 17 ವರ್ಷಗಳ ಹಿಂದೆ ಅನೇಕ ಜನತಾ ಪರಿವಾರದ ನಾಯಕರು ಬಿಜೆಪಿ ಸೇರಿದ್ದಾರೆ. ನಾವೆಲ್ಲ ಹೊರಗಿನಿಂದ ಬಂದಿದ್ದರೂ ಬಿಜೆಪಿ ಸಿದ್ಧಾಂತಕ್ಕೆ ಬದ್ಧರಾಗಿಯೆ ಬಂದಿದ್ದೇವೆ. ಇದು ಪಕ್ಷದ ವರಿಷ್ಠರಿಗೂ ಗೊತ್ತು. ಹೀಗಾಗಿ, ಬೊಮ್ಮಾಯಿ ಬದಲಾವಣೆ ವಿಷಯ ಸಾಕಷ್ಟು ಅಸಮಾಧಾನಕ್ಕೂ ಕಾರಣವಾಗಬಹುದು. ಅಲ್ಲದೆ, ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನಿಸಲೂ ಬಹುದು. ಇದೆಲ್ಲ ಪಕ್ಷದ ಭವಿಷ್ಯಕ್ಕೆ ಕುಂದು ತರಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.