<p>ವಿಜಯಪುರ: ಸಾರ್ವಜನಿಕರ ಕೆಲಸ, ಕಾರ್ಯಗಳಿಗೆ ಅನುಕೂಲವಾಗಿಸುವ ಉದ್ದೇಶದಿಂದ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ವಲಯ ಕಚೇರಿ ಆರಂಭಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.</p>.<p>35 ವಾರ್ಡ್ಗಳನ್ನು ಒಳಗೊಂಡಿರುವ ಹಾಗೂ ಜಲನಗರನಲ್ಲಿ ಮುಖ್ಯ ಕಚೇರಿ ಇರುವಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಿಸುವ ಉದ್ದೇಶದಿಂದ ಈ ಕೆಳಕಂಡಂತೆ 3 ವಲಯ ಕಚೇರಿಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.</p>.<p>ವಲಯ ಕಚೇರಿ 1: ಗಾಂಧಿಚೌಕ ವಾರ್ಡ್. ನಂ.1 ರಿಂದ 11 ರ ವರೆಗೆ ಹಾಗೂ ವಾರ್ಡ್ ನಂ.27, 31, 32.</p>.<p>ವಲಯ ಕಚೇರಿ 2: ಬಡಿಕಮಾನ್ ರೋಡ್ ನಗರ ನೀರು ಸರಬರಾಜು ಕಾರ್ಯಾಲಯ. ವಾರ್ಡ್ ನಂ.12 ರಿಂದ 20 ರ ವರೆಗೆ ಹಾಗೂ 24 ರಿಂದ 26 ರ ವರೆಗೆ.</p>.<p>ವಲಯ ಕಚೇರಿ 3: ಜಲನಗರ ಮುಖ್ಯ ಕಚೇರಿಯಲ್ಲಿ ವಾರ್ಡ್ ನಂ.21 ರಿಂದ 23 ಮತ್ತು 28 ರಿಂದ 30 ಮತ್ತು 33 ರಿಂದ 35 ರ ವರೆಗೆ.</p>.<p>ಶೀಘ್ರದಲ್ಲಿ ಸಾರ್ವಜನಿಕರ ಕುಂದು ಕೊರತೆ ಹಾಗೂ ಸೇವೆಗಳಿಗೆ ವಲಯ ಕಚೇರಿಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ಸಾರ್ವಜನಿಕರ ಕೆಲಸ, ಕಾರ್ಯಗಳಿಗೆ ಅನುಕೂಲವಾಗಿಸುವ ಉದ್ದೇಶದಿಂದ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ವಲಯ ಕಚೇರಿ ಆರಂಭಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.</p>.<p>35 ವಾರ್ಡ್ಗಳನ್ನು ಒಳಗೊಂಡಿರುವ ಹಾಗೂ ಜಲನಗರನಲ್ಲಿ ಮುಖ್ಯ ಕಚೇರಿ ಇರುವಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಿಸುವ ಉದ್ದೇಶದಿಂದ ಈ ಕೆಳಕಂಡಂತೆ 3 ವಲಯ ಕಚೇರಿಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.</p>.<p>ವಲಯ ಕಚೇರಿ 1: ಗಾಂಧಿಚೌಕ ವಾರ್ಡ್. ನಂ.1 ರಿಂದ 11 ರ ವರೆಗೆ ಹಾಗೂ ವಾರ್ಡ್ ನಂ.27, 31, 32.</p>.<p>ವಲಯ ಕಚೇರಿ 2: ಬಡಿಕಮಾನ್ ರೋಡ್ ನಗರ ನೀರು ಸರಬರಾಜು ಕಾರ್ಯಾಲಯ. ವಾರ್ಡ್ ನಂ.12 ರಿಂದ 20 ರ ವರೆಗೆ ಹಾಗೂ 24 ರಿಂದ 26 ರ ವರೆಗೆ.</p>.<p>ವಲಯ ಕಚೇರಿ 3: ಜಲನಗರ ಮುಖ್ಯ ಕಚೇರಿಯಲ್ಲಿ ವಾರ್ಡ್ ನಂ.21 ರಿಂದ 23 ಮತ್ತು 28 ರಿಂದ 30 ಮತ್ತು 33 ರಿಂದ 35 ರ ವರೆಗೆ.</p>.<p>ಶೀಘ್ರದಲ್ಲಿ ಸಾರ್ವಜನಿಕರ ಕುಂದು ಕೊರತೆ ಹಾಗೂ ಸೇವೆಗಳಿಗೆ ವಲಯ ಕಚೇರಿಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>