ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಎಲ್. ಅರಸಿದ್ದಿ ನೇತೃತ್ವದಲ್ಲಿ ಡಿವೈಎಸ್ಪಿ ಎಂ.ಬಿ.ಸಂಕದ, ಸಿಂದಗಿ ಸಿಪಿಐ ಸತೀಶಕುಮಾರ ಎಸ್.ಕಾಂಬಳೆ, ಚಡಚಣ ಸಿಪಿಐ ಚಿದಂಬರ, ಇಂಡಿ ಸಿಪಿಐ ಆರ್.ಎಸ್.ಬಡದೇಸಾರ, ಇಂಡಿ ಗ್ರಾಮೀಣ ಪಿಎಸ್ಐ ಎಸ್.ಎನ್.ಶಿರಗುಪ್ಪಿ, ಆಲಮೇಲ ಪಿಎಸ್ಐ ಎನ್.ಎಚ್.ಪೂಜೇರಿ, ಹೊರ್ತಿ ಪಿಎಸ್ಐ ಎಂ.ಬಿ.ಬಿರಾದಾರ ಮತ್ತು ಸಿಬ್ಬಂದಿ ಒಳಗೊಂಡ ತನಿಖಾ ತಂಡ ಹಿರೇಬೇವನೂರ ಗ್ರಾಮದ ಹತ್ತಿರ ಆರೋಪಿಗಳನ್ನು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.