ಹಬ್ಬದ ಆಚರಣೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಜಯಪುರ ಬಬಲೇಶ್ವರ ನಾಕಾದ ನಿವಾಸಿ, ತಾರಾಪುರ ಎಚ್. ಶಾಲೆಯ ಮುಖ್ಯ ಶಿಕ್ಷಕ ಅಝೀಜ್ ಅರಳಿಕಟ್ಟಿ, ಕೋವಿಡ್ ಸಂಕಷ್ಟದ ಕಾರಣ ಈ ಬಾರಿ ಹಬ್ಬವನ್ನು ಸರಳವಾಗಿ, ಮನೆಪೂರ್ತಿಗೆ ಆಚರಿಸಿದೆವು. ಹೊಸಬಟ್ಟೆ ಸೇರಿದಂತೆ ಏನೊಂದನ್ನು ಖರೀದಿಸಲಿಲ್ಲ. ಮನೆಯಲ್ಲೇ ಕುಟುಂಬದವರು ಸೇರಿಕೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿ, ಅಲ್ಲಾಹುವನ್ನು ಸ್ಮರಿಸಿದೆವು. ಹಬ್ಬಕ್ಕೆ ಮಾಡಬೇಕಾದ ಖರ್ಚು, ವೆಚ್ಚವನ್ನು ಉಳಿಸಿ ಬಡವರಿಗೆ, ಸಂಕಷ್ಟದಲ್ಲಿರುವವರಿಗೆ ನೆರವು ನೀಡಿದೆವು ಎಂದು ಹೇಳಿದರು.