ಮಹೋತ್ಸವಕ್ಕೆ ಚಾಲನೆ ನೀಡಿದ ನಿರ್ಭಯಾನಂದ ಸ್ವಾಮೀಜಿ, ‘ಮಕ್ಕಳಿಗೆ ಬಾಲ್ಯದಲ್ಲಿಯೇ ಭಾರತೀಯ ಸಂಸ್ಕೃತಿಯ ಮನೋಭಾವವನ್ನು ಬಿತ್ತಬೇಕು. ಒಂದು ಸಸಿ ನೆಟ್ಟಗೆ ಬೆಳೆಯಲು ಕಟ್ಟಿಗೆಯೊಂದನ್ನು ಆಧಾರವಾಗಿ ಇಡುತ್ತೇವೆ, ಮರವಾಗಿ ಬೆಳೆದಾಗ ಕಟ್ಟಿಗೆ ಇಟ್ಟರೆ, ಅದು ನೆಟ್ಟಗೆ ಬೆಳೆಯಲು ಸಾಧ್ಯವೇ ಇಲ್ಲ. ಈ ಕಾರಣಕ್ಕಾಗಿ ಬಾಲ್ಯದಲ್ಲಿಯೇ ಅದ್ಭುತವಾದ, ಶ್ರೇಷ್ಠವಾದ ಭಾರತೀಯ ಸಂಸ್ಕೃತಿಯನ್ನು ಮಕ್ಕಳ ಮನದಲ್ಲಿ ಬಿತ್ತಬೇಕು’ ಎಂದು ಕಿವಿಮಾತು ಹೇಳಿದರು.