ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕೋಶಾಧ್ಯಕ್ಷ ಸಂಗಮೇಶ ಮೇತ್ರಿ ಮಾತನಾಡಿ, ‘ಡಾ.ಸಿಂಪಿ ಲಿಂಗಣ್ಣ ಜಾನಪದ ಸಂಶೋಧಕರಾಗಿ, ಕವಿಗಳಾಗಿ, ಪ್ರಬಂಧಕಾರ ಮತ್ತು ನಾಟಕಕಾರರಾಗಿ ರಾಜ್ಯಕ್ಕೆ ಪರಿಚಿತರಾಗಿದ್ದಾರೆ. ಕೊಪ್ಪಳದಲ್ಲಿ ಜರುಗಿದ 62ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಾಕ್ಷರಾಗಿ, ಗಡಿನಾಡಿನ ಜಾನಪದ ಭೀಷ್ಮರಾಗಿ, ಜಾನಪದ ಸಾಹಿತ್ಯಕ್ಕೆ ಒಂದು ಘನತೆ ತಂದು ಕೊಟ್ಟ ಮಹಾನ ಚೇತನ’ ಎಂದರು.