ಡೋಣಿ ನದಿ ದಂಡೆಯಲ್ಲಿರುವ ತುಂಬಗಿ, ಫತ್ತೆಪೂರ, ಬೊಮ್ಮನಳ್ಳಿ, ಗುತ್ತಿಹಾಳ, ಸಾಸನೂರ, ಹಿರೂರ, ತಾಳಿಕೋಟೆ ಗ್ರಾಮಗಳ ಸಾವಿರಾರು ಎಕರೆ ಭೂಮಿ ನೀರಲ್ಲಿದೆ, ಹೆಚ್ಚಿನೆಡೆ ಕೊಚ್ಚಿ ಹೋಗಿದೆ. ಇತ್ತ ಮೂಕಿಹಾಳ ಬಳಿಯ ಸೋಗಲಿ ಹಳ್ಳವೂ ಅಪಾಯದ ಮಟ್ಟ ದಾಟಿದೆ. ಮೂಕಿಹಾಳ, ಹರನಾಳ, ಕಲ್ಲದೇವನಹಳ್ಳಿ, ಹಡಗಿನಾಳ ಮೊದಲಾದ ಗ್ರಾಮಗಳ ಜಮೀನುಗಳಲ್ಲಿ ಅಪಾರ ಕೊರೆತವುಂಟಾಗಿದ್ದು ಫಲವತ್ತಾದ ಮಣ್ಣೆಲ್ಲ ಕೊಚ್ಚಿ ಹೋಗಿದೆ. ಬೆಳೆ, ಭೂಮಿ ನಾಶವಾದ ಜನರಿಗೆ ಶೀಘ್ರದಲ್ಲಿ ಪರಿಹಾರ ಒದಗಿಸಬೇಕು ಎಂದು ಕಲ್ಲದೇವನಹಳ್ಳಿ ರೈತ ಸೋಮನಗೌಡ ಬಿರಾದಾರ ಒತ್ತಾಯಿಸಿದರು.