<p><strong>ವಿಜಯಪುರ:</strong> ‘ಭಾರತವೆಂದರೆ ಕೇವಲ ಸಂವಿಧಾನ, ಅಂಬೇಡ್ಕರ್, ರಾಷ್ಟ್ರ ಧ್ವಜ ಮಾತ್ರವಲ್ಲ’ ಎಂದು ಧರ್ಮ ಜಾಗರಣ ಪ್ರಾಂತ ಸದಸ್ಯ ಹಣಮಂತ ಮಳಲಿ ಹೇಳಿದರು.</p>.<p>ಇಲ್ಲಿನ ಜಲನಗರದ ಬಿಡಿಎ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬೃಹತ್ ಹಿಂದೂ ಸಮ್ಮೇಳನದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಮಾತನಾಡಿದರು.</p>.<p>‘ಇಡೀ ವಿಶ್ವಕ್ಕೆ ಮೊದಲ ಬಾರಿಗೆ ವಿಮಾನ, ಯೋಗ, ಸೊನ್ನೆ, ಶಿಲ್ಪಕಲೆ, ವಸ್ತ್ರ ನೀಡಿದ ದೇಶ ಭಾರತ ಎಂಬುದನ್ನು ಮರೆತು ಸ್ವಾಭಿಮಾನ ಶೂನ್ಯರಾಗಬಾರದು’ ಎಂದು ಹೇಳಿದರು.</p>.<p>‘ಹಿಂದುಗಳಲ್ಲಿ ದೇವರು, ಉಪಾಸನ, ಆಚಾರ-ವಿಚಾರ ಬೇರೆಯಾದರೂ ಗಂಗಾ ಪೂಜೆ, ಭೂಮಿ ಪೂಜೆ, ಹೆತ್ತ ತಂದೆ, ತಾಯಿ ಪೂಜೆ, ಲಕ್ಷ್ಮಿ ಪೂಜೆ ಮಾಡುವ ಮೌಲ್ಯಾಧಾರಿತ ಜೀವನ ಪದ್ಧತಿ ಒಂದೇ ಇದೆ’ ಎಂದರು.</p>.<p>‘10 ಸಾವಿರ ವರ್ಷಗಳ ಕಾಲ ಆವಿಷ್ಕಾರಗೊಂಡು, ರೂಪುಗೊಂಡ ಧರ್ಮವೇ ಹಿಂದೂ ಧರ್ಮವಾಗಿದೆ, ಹಿಂಸೆ, ಹೀನತನ ಒಪ್ಪದ ಧರ್ಮವೇ ಹಿಂದೂ ಧರ್ಮವಾಗಿದೆ’ ಎಂದರು. </p>.<p>‘ಯಾವುದೇ ಪಕ್ಷಕ್ಕೆ ಮತ ಹಾಕಿ. ಆದರೆ, ರಾಷ್ಟ್ರದ ಹಿತ ಕಾಯುವವರಿಗೆ ಮಾತ್ರ ಮತ ಹಾಕಿ. ಜಾತಿ, ಮತ, ಪಂಥ, ವೈಯಕ್ತಿಕ ವಿಷಯ ಬಿಟ್ಟು ದೇಶದ ಹಿತಕ್ಕಾಗಿ ಶ್ರಮಿಸಿ’ ಎಂದರು.</p>.<p>‘ರುದ್ರಾಕ್ಷಿ, ವಿಭೂತಿ, ಕಾವಿ ಧರಿಸಿದ ಕೆಲ ಸ್ವಾಮೀಜಿಗಳೇ ಇಂದು ನಾವು ಹಿಂದುಗಳಲ್ಲ ಎಂದು ಹೇಳತೊಡಗಿದ್ದಾರೆ. ಅಜ್ಞಾನಪೂರ್ವಕವಾಗಿ ಎಂದೋ ಆಚರಣೆಯಲ್ಲಿದ್ದ ಅಸ್ಪೃಶ್ಯತೆ ಬಗ್ಗೆ ಇಂದಿಗೂ ಹೇಳಿಕೊಂಡು ಹೋದರೆ ಆಗದು’ ಎಂದರು.</p>.<p>‘ವಿಶ್ವವೇ ಇಂದು ಭಾರತಕ್ಕೆ ಹೆದರುವ ಕಾಲ ಬಂದಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಭಾರತೀಯ ವಸ್ತುಗಳನ್ನೇ ಖರೀದಿಸಬೇಕು, ವಿದೇಶಿ ವಸ್ತುಗಳನ್ನು ನಿರಾಕರಿಸಬೇಕು, ಪರಿಸರ ಬೆಳೆಸಬೇಕು, ಕುಟುಂಬ ಸಂಸ್ಕಾರ ಬಲಪಡಿಸಬೇಕು, ನಾಗರಿಕ ಕರ್ತವ್ಯ ಪಾಲನೆ ಮಾಡಬೇಕು, ಜಾತಿ–ಭೇದಗಳ ದೂರ ಸರಿಸಬೇಕು, ಸಮರಸ ಸಮಾಜ ರಚಿಸಬೇಕು’ ಎಂದರು.</p>.<p>ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಕೆಸರಟ್ಟಿಯ ಸೋಮಲಿಂಗ ಸ್ವಾಮೀಜಿ, ಬುರಾಣಪುರದ ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು.</p>.<p>ಹಿಂದೂ ಸಮ್ಮೇಳನದ ಸಂಚಾಲನಾ ಸಮಿತಿ ಸಂಚಾಲಕ ಸುರೇಶ ದೇಸಾಯಿ, ಡಾ.ಪ್ರಾಣೇಶ ಜಹಾಗೀರದಾರ, ಲಿಂಗರಾಜ ಹಿರೇಮಠ, ಚಂದ್ರು ಚೌಧರಿ, ಶ್ರೀಧರ ನಾರಾಯಣಕರ, ನಾರಾಯಣಸಿಂಗ್ ಹಜೇರಿ, ಭುವನೇಶ್ವರಿ ಕೋರವಾರ, ಸುನೀತಾ ಪಾಟೀಲ, ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ, ವಿಕಾಸ ಪದಕಿ ಇದ್ದರು. </p>.<div><blockquote>ಆರ್. ಎಸ್. ಎಸ್ ತನ್ನ ವಿರುದ್ಧದ ಯಾವುದೇ ಟೀಕೆಗಳಿಗೆ ಉತ್ತರ ನೀಡುವುದಿಲ್ಲ. ಆರ್ಎಸ್ಎಸ್ ವಿರೋಧಿಸುವವರು ಸಂಘಕ್ಕೆ ಬರಬೇಕು ತಿಳಿದುಕೊಳ್ಳಬೇಕು ಅರ್ಥೈಸಿಕೊಳಬೇಕು -</blockquote><span class="attribution">ಹಣಮಂತ ಮಳಲಿ, ಸದಸ್ಯ ಧರ್ಮ ಜಾಗರಣ ಪ್ರಾಂತ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ‘ಭಾರತವೆಂದರೆ ಕೇವಲ ಸಂವಿಧಾನ, ಅಂಬೇಡ್ಕರ್, ರಾಷ್ಟ್ರ ಧ್ವಜ ಮಾತ್ರವಲ್ಲ’ ಎಂದು ಧರ್ಮ ಜಾಗರಣ ಪ್ರಾಂತ ಸದಸ್ಯ ಹಣಮಂತ ಮಳಲಿ ಹೇಳಿದರು.</p>.<p>ಇಲ್ಲಿನ ಜಲನಗರದ ಬಿಡಿಎ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬೃಹತ್ ಹಿಂದೂ ಸಮ್ಮೇಳನದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಮಾತನಾಡಿದರು.</p>.<p>‘ಇಡೀ ವಿಶ್ವಕ್ಕೆ ಮೊದಲ ಬಾರಿಗೆ ವಿಮಾನ, ಯೋಗ, ಸೊನ್ನೆ, ಶಿಲ್ಪಕಲೆ, ವಸ್ತ್ರ ನೀಡಿದ ದೇಶ ಭಾರತ ಎಂಬುದನ್ನು ಮರೆತು ಸ್ವಾಭಿಮಾನ ಶೂನ್ಯರಾಗಬಾರದು’ ಎಂದು ಹೇಳಿದರು.</p>.<p>‘ಹಿಂದುಗಳಲ್ಲಿ ದೇವರು, ಉಪಾಸನ, ಆಚಾರ-ವಿಚಾರ ಬೇರೆಯಾದರೂ ಗಂಗಾ ಪೂಜೆ, ಭೂಮಿ ಪೂಜೆ, ಹೆತ್ತ ತಂದೆ, ತಾಯಿ ಪೂಜೆ, ಲಕ್ಷ್ಮಿ ಪೂಜೆ ಮಾಡುವ ಮೌಲ್ಯಾಧಾರಿತ ಜೀವನ ಪದ್ಧತಿ ಒಂದೇ ಇದೆ’ ಎಂದರು.</p>.<p>‘10 ಸಾವಿರ ವರ್ಷಗಳ ಕಾಲ ಆವಿಷ್ಕಾರಗೊಂಡು, ರೂಪುಗೊಂಡ ಧರ್ಮವೇ ಹಿಂದೂ ಧರ್ಮವಾಗಿದೆ, ಹಿಂಸೆ, ಹೀನತನ ಒಪ್ಪದ ಧರ್ಮವೇ ಹಿಂದೂ ಧರ್ಮವಾಗಿದೆ’ ಎಂದರು. </p>.<p>‘ಯಾವುದೇ ಪಕ್ಷಕ್ಕೆ ಮತ ಹಾಕಿ. ಆದರೆ, ರಾಷ್ಟ್ರದ ಹಿತ ಕಾಯುವವರಿಗೆ ಮಾತ್ರ ಮತ ಹಾಕಿ. ಜಾತಿ, ಮತ, ಪಂಥ, ವೈಯಕ್ತಿಕ ವಿಷಯ ಬಿಟ್ಟು ದೇಶದ ಹಿತಕ್ಕಾಗಿ ಶ್ರಮಿಸಿ’ ಎಂದರು.</p>.<p>‘ರುದ್ರಾಕ್ಷಿ, ವಿಭೂತಿ, ಕಾವಿ ಧರಿಸಿದ ಕೆಲ ಸ್ವಾಮೀಜಿಗಳೇ ಇಂದು ನಾವು ಹಿಂದುಗಳಲ್ಲ ಎಂದು ಹೇಳತೊಡಗಿದ್ದಾರೆ. ಅಜ್ಞಾನಪೂರ್ವಕವಾಗಿ ಎಂದೋ ಆಚರಣೆಯಲ್ಲಿದ್ದ ಅಸ್ಪೃಶ್ಯತೆ ಬಗ್ಗೆ ಇಂದಿಗೂ ಹೇಳಿಕೊಂಡು ಹೋದರೆ ಆಗದು’ ಎಂದರು.</p>.<p>‘ವಿಶ್ವವೇ ಇಂದು ಭಾರತಕ್ಕೆ ಹೆದರುವ ಕಾಲ ಬಂದಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಭಾರತೀಯ ವಸ್ತುಗಳನ್ನೇ ಖರೀದಿಸಬೇಕು, ವಿದೇಶಿ ವಸ್ತುಗಳನ್ನು ನಿರಾಕರಿಸಬೇಕು, ಪರಿಸರ ಬೆಳೆಸಬೇಕು, ಕುಟುಂಬ ಸಂಸ್ಕಾರ ಬಲಪಡಿಸಬೇಕು, ನಾಗರಿಕ ಕರ್ತವ್ಯ ಪಾಲನೆ ಮಾಡಬೇಕು, ಜಾತಿ–ಭೇದಗಳ ದೂರ ಸರಿಸಬೇಕು, ಸಮರಸ ಸಮಾಜ ರಚಿಸಬೇಕು’ ಎಂದರು.</p>.<p>ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಕೆಸರಟ್ಟಿಯ ಸೋಮಲಿಂಗ ಸ್ವಾಮೀಜಿ, ಬುರಾಣಪುರದ ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು.</p>.<p>ಹಿಂದೂ ಸಮ್ಮೇಳನದ ಸಂಚಾಲನಾ ಸಮಿತಿ ಸಂಚಾಲಕ ಸುರೇಶ ದೇಸಾಯಿ, ಡಾ.ಪ್ರಾಣೇಶ ಜಹಾಗೀರದಾರ, ಲಿಂಗರಾಜ ಹಿರೇಮಠ, ಚಂದ್ರು ಚೌಧರಿ, ಶ್ರೀಧರ ನಾರಾಯಣಕರ, ನಾರಾಯಣಸಿಂಗ್ ಹಜೇರಿ, ಭುವನೇಶ್ವರಿ ಕೋರವಾರ, ಸುನೀತಾ ಪಾಟೀಲ, ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ, ವಿಕಾಸ ಪದಕಿ ಇದ್ದರು. </p>.<div><blockquote>ಆರ್. ಎಸ್. ಎಸ್ ತನ್ನ ವಿರುದ್ಧದ ಯಾವುದೇ ಟೀಕೆಗಳಿಗೆ ಉತ್ತರ ನೀಡುವುದಿಲ್ಲ. ಆರ್ಎಸ್ಎಸ್ ವಿರೋಧಿಸುವವರು ಸಂಘಕ್ಕೆ ಬರಬೇಕು ತಿಳಿದುಕೊಳ್ಳಬೇಕು ಅರ್ಥೈಸಿಕೊಳಬೇಕು -</blockquote><span class="attribution">ಹಣಮಂತ ಮಳಲಿ, ಸದಸ್ಯ ಧರ್ಮ ಜಾಗರಣ ಪ್ರಾಂತ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>