ವಿಜಯಪುರ:‘ವಿಜಯಪುರ ನಗರದ ಇಬ್ರಾಹಿಂಪುರ ರೈಲ್ವೆ ಮೇಲ್ಸೇತುವೆ ಮಾಡುತ್ತಿರುವ ಎಂಜಿನಿಯರ್ ಒಬ್ಬರನ್ನು ಬಿಟ್ಟು, ಉಳಿದೆಲ್ಲ ಎಂಜಿನಿಯರ್ಗಳಿಗೆ ಎಂಜಿನಿಯರ್ಸ್ ದಿನದ ಶುಭಾಶಯಗಳು’ ಎಂಬ ಸಂದೇಶವೊಂದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ಎಲ್ಲರ ಗಮನ ಸೆಳೆಯಿತು.
ಮೂರು ವರ್ಷವಾದರೂ ಇಬ್ರಾಹಿಂಪುರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಗಿಯದೇ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಆಕ್ರೋಶಗೊಂಡ ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಎಂಜಿನಿಯರ್ ದಿನದ ಶುಭಾಷಯಗಳನ್ನು ಈ ರೀತಿ ವಿಭಿನ್ನವಾಗಿ ಕೋರಿದ್ದಾರೆ.