ತಾಂಬಾ(ವಿಜಯಪುರ): ಜಾತ್ಯತೀತ ರಾಜಕಾರಣ ಮಾಡುವ ಯಾವುದಾದರೂ ಪಕ್ಷ ದೇಶದಲ್ಲಿದ್ದರೆ ಅದು ಕಾಂಗ್ರೆಸ್ ಮಾತ್ರ. ಜೆಡಿಎಸ್ನದ್ದು ಸೂಟ್ಕೇಸ್ ರಾಜಕಾರಣ ಮಾಡುತ್ತಿದೆ. ಹೀಗಾಗಿಯೇ ಹಾನಗಲ್ ಕ್ಷೇತ್ರಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಇನ್ನೂವರೆಗೂ ಹೋಗಿಲ್ಲ. ಅಲ್ಲಿಂದ ಜೆಡಿಎಸ್ಗೆ ಯಾವುದೇ ಸೂಟ್ಕೇಸ್ ಬಂದಿಲ್ಲ ಶಾಸಕ ಜಮೀರ್ ಅಹ್ಮದ್ ಖಾನ್ ಆರೋಪಿಸಿದರು.
ತಾಂಬಾ ಗ್ರಾಮದಲ್ಲಿ ಸಿಂದಗಿ ಉಪಚುನಾವಣೆಯ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಶನಿವಾರ ಮತಯಾಚಿಸಿ ಅವರು ಮಾತನಾಡಿದರು.
ಅಚಾನಕ್ಕಾಗಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಹಜ್ ಕಾರ್ಯಕ್ರಮಕ್ಕೆ ಬಂದಿಲ್ಲ. ಟಿಪ್ಪು ಸುಲ್ತಾನ್ ಜಯಂತಿಯು ವಿಧಾನಸೌಧದಲ್ಲಿ ಆಚರಣೆ ಮಾಡಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಹಿಂದೆ ಎಐಎಂಐಎಂ ಪಕ್ಷವು ಬಿಜೆಪಿಯ ಬಿ–ಟೀಂ ಆಗಿತ್ತು. ಸದ್ಯದ ರಾಜ್ಯ ರಾಜಕೀಯದಲ್ಲಿ ಜೆಡಿಎಸ್ ಬಿ–ಟೀಂ ಆಗಿದೆ ಎಂದು ಟೀಕಿಸಿದರು.
ಮಾಜಿ ಸಚಿವ ಯು.ಟಿ. ಖಾದರ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಎಲ್ಲ ಜನಾಂಗದ ವರ್ಗಗಳಿಗೆ ಸಮಾನತೆ ನೀಡುವ ಪಕ್ಷವಾಗಿದೆ ಎಂದು ಹೇಳಿದರು.
ಹಮ್ಮಿದ್ ಮುಸ್ರಿಪ್, ನಾಸಿರಹುಸೇನ, ರಹಿಮಾನ ಖಾನ್, ಜಿ ಎ ಬಾವಾ, ಇಲಿಯಾಸ್ ಬೋರಾಮಣಿ, ಜಾವಿದ್ ಮೋಮಿನ್, ಮಹ್ಮದ್ ವಾಲಿಕಾರ, ಇರ್ಫಾನ್ ಶೇಖ್, ಫತ್ತುಸಾಬ ಉಜನಿ, ಫಾರೂಖ್ ಮುಲ್ಲಾ, ಪರಸರಾಮ ಬಿಸನಾಳ, ಅಪ್ಪಣ್ಣ ಕಲ್ಲೂರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.