ವಿಜಯಪುರ: ಬೆಂಗಳೂರಲ್ಲಿ ಇತ್ತೀಚೆಗೆ ನಡೆದ ಮಿನಿ ಓಲಂಪಿಕ್ಜುಡೋ ಕ್ರೀಡೆಯಲ್ಲಿ ವಿಜಯಪುರದ ಹರಣಶಿಕಾರಿ ಸಮುದಾಯದ ಸ್ವೇರೋಸ್ ಕರ್ನಾಟಕ ಕಲಿಕಾ ಕೇಂದ್ರದ ಕ್ರೀಡಾಪಟುಗಳು ಭಾಗವಹಿಸಿ ಮೂರು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಶ್ರಾವಂತಿ ಶಿಂಗೆ ಚಿನ್ನದ ಪದಕ ಪಡೆದರು. ವಿಶೇಷವಾಗಿ ಆದಿವಾಸಿ ಅಲೆಮಾರಿ ಬುಡಕಟ್ಟು ಹರಣಶಿಕಾರಿ ಸಮುದಾಯದ ತನುಶ್ರೀ ಕಾಳೆ ಕಂಚಿನ ಪದಕ, ಸುಭಾಶ್ ದೊಡಮನಿ ಕಂಚಿನ ಪದಕ, ಅರ್ಚನಾ ಕಾಳೆ ನಾಲ್ಕನೇ ಸ್ಥಾನ ಪಡೆದರು.
ವಿದ್ಯಾರ್ಥಿಗಳಿಗೆ ಶಂಕರ ಎಸ್.ಎಸ್. ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ರಾಜ್ಯ ಸ್ವೇರೋಸ್ ಕರ್ನಾಟಕ ಕಲಿಕಾ ಕೇಂದ್ರದ ವಾಸುದೇವ ಕಾಳೆ ಅಭಿನಂದಿಸಿದ್ದಾರೆ.