ಕಟ್ಟಡದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನಜ್ಯೋತಿ ಗ್ರಂಥಾಲಯ, ಶಾಂತಿದೂತ ಉದ್ಯಾನ, ವಿಶಾಲ ಸಭಾಭವನ, ಸುಸಜ್ಜಿತ ಸಿಮೆಂಟ್ ರಸ್ತೆ, ಆವರಣ ಗೋಡೆಗಳು ನಿರ್ಮಾಣವಾಗಲಿವೆ. ಈ ಎಲ್ಲದರ ಕಾಮಗಾರಿ ಈ ವರ್ಷದ ಅಕ್ಟೋಬರ್ ಅಂತ್ಯದಲ್ಲಿ ಕೊನೆಗೊಳ್ಳಲಿವೆ. ನಂತರ ಕಡಕೋಳ ಬುದ್ಧವಿಹಾರ ಕಲಬುರ್ಗಿ ಬುದ್ಧವಿಹಾರದಂತೆ ಪ್ರವಾಸಿ ತಾಣವಾಗಲಿದೆ. ಯಾತ್ರಿಕರನ್ನು ಈ ತಾಣ ಸೆಳೆಯುವಲ್ಲಿ ಸಂದೇಹವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.