<p><strong>ಸಿಂದಗಿ:</strong> ‘ನಗರದ ಸಾರಿಗೆ ಘಟಕದಲ್ಲಿ 104 ಅನುಸೂಚಿಗಳು ಕಾರ್ಯಾಚರಣೆಯಲ್ಲಿವೆ. ಆದರೆ ಘಟಕದಲ್ಲಿ 105 ಬಸ್ಗಳಿವೆ. ದೈನಂದಿನ ಕಾರ್ಯಾಚರಣೆಗೆ 30 ಬಸ್ಗಳ ಕೊರತೆ ಇದೆ’ ಎಂದು ಘಟಕದ ಸಿಬ್ಬಂದಿ ಶಾಸಕ ಅಶೋಕ ಮನಗೂಳಿಯವರಿಗೆ ತಿಳಿಸಿದರು.</p>.<p>ನಗರದ ಸಾರಿಗೆ ಘಟಕದಲ್ಲಿ ಮಂಗಳವಾರ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಗತ್ಯ ಬೇಡಿಕೆಗಳನ್ನು ಸಿಬ್ಬಂದಿ ಪ್ರಸ್ತಾಪಿಸಿದರು.</p>.<p>‘ಘಟಕದ ಸಿಬ್ಬಂದಿ ವಾಸಕ್ಕಾಗಿ 30 ವಸತಿ ಗೃಹಗಳ ನಿರ್ಮಾಣ ಆಗಬೇಕು. ಘಟಕದ ಕಾರ್ಯಾಲಯದ ಕೊಠಡಿಗಳ ದುರಸ್ತಿಯಾಗಬೇಕು ಹಾಗೂ ಇಲ್ಲಿಯ ಪೂಜ್ಯ ಚೆನ್ನವೀರಸ್ವಾಮೀಜಿ ಕೇಂದ್ರ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಬೇಕು’ ಎಂಬ ಪ್ರಮುಖ ಮೂರು ವಿಷಯಗಳ ಚರ್ಚೆ ನಡೆಯಿತು.</p>.<p>ಸಾರಿಗೆ ಘಟಕದ ಸಿಬ್ಬಂದಿ ಬೇಡಿಕೆಗಳನ್ನು ಆಲಿಸಿದ ಶಾಸಕ ಮನಗೂಳಿ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.</p>.<p>ಕೆಎಸ್ಆರ್ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಯೂನಿಯನ್ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಹಿರೇಮಠ ಸಭೆಯಲ್ಲಿ ಹಾಜರಿದ್ದು ಬೇಡಿಕೆಗಳ ಬಗ್ಗೆ ಮೌಖಿಕವಾಗಿ ಶಾಸಕರಿಗೆ ಮನವಿ ಮಾಡಿಕೊಂಡರು.</p>.<p>ಸಾರಿಗೆ ನಿಯಂತ್ರಕ ಎಂ.ಬಿ.ಪೂಜಾರಿ, ಸಾರಿಗೆ ಇಲಾಖೆ ಎಇಇ ಮಲ್ಲಿಕಾರ್ಜುನ ಬಿರಾದಾರ, ನಗರ ಸಾರಿಗೆ ಘಟಕ ವ್ಯವಸ್ಥಾಪಕ ಎಂ.ಆರ್.ಲಮಾಣಿ, ಶ್ರೀಕಾಂತ ಮೆಟಗಾರ, ಶಿವಶರಣ ಹೊಸಮನಿ, ಅರವಿಂದ, ಗೌಡಪ್ಪಗೌಡ ಹಂದ್ರಾಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ:</strong> ‘ನಗರದ ಸಾರಿಗೆ ಘಟಕದಲ್ಲಿ 104 ಅನುಸೂಚಿಗಳು ಕಾರ್ಯಾಚರಣೆಯಲ್ಲಿವೆ. ಆದರೆ ಘಟಕದಲ್ಲಿ 105 ಬಸ್ಗಳಿವೆ. ದೈನಂದಿನ ಕಾರ್ಯಾಚರಣೆಗೆ 30 ಬಸ್ಗಳ ಕೊರತೆ ಇದೆ’ ಎಂದು ಘಟಕದ ಸಿಬ್ಬಂದಿ ಶಾಸಕ ಅಶೋಕ ಮನಗೂಳಿಯವರಿಗೆ ತಿಳಿಸಿದರು.</p>.<p>ನಗರದ ಸಾರಿಗೆ ಘಟಕದಲ್ಲಿ ಮಂಗಳವಾರ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಗತ್ಯ ಬೇಡಿಕೆಗಳನ್ನು ಸಿಬ್ಬಂದಿ ಪ್ರಸ್ತಾಪಿಸಿದರು.</p>.<p>‘ಘಟಕದ ಸಿಬ್ಬಂದಿ ವಾಸಕ್ಕಾಗಿ 30 ವಸತಿ ಗೃಹಗಳ ನಿರ್ಮಾಣ ಆಗಬೇಕು. ಘಟಕದ ಕಾರ್ಯಾಲಯದ ಕೊಠಡಿಗಳ ದುರಸ್ತಿಯಾಗಬೇಕು ಹಾಗೂ ಇಲ್ಲಿಯ ಪೂಜ್ಯ ಚೆನ್ನವೀರಸ್ವಾಮೀಜಿ ಕೇಂದ್ರ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಬೇಕು’ ಎಂಬ ಪ್ರಮುಖ ಮೂರು ವಿಷಯಗಳ ಚರ್ಚೆ ನಡೆಯಿತು.</p>.<p>ಸಾರಿಗೆ ಘಟಕದ ಸಿಬ್ಬಂದಿ ಬೇಡಿಕೆಗಳನ್ನು ಆಲಿಸಿದ ಶಾಸಕ ಮನಗೂಳಿ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.</p>.<p>ಕೆಎಸ್ಆರ್ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಯೂನಿಯನ್ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಹಿರೇಮಠ ಸಭೆಯಲ್ಲಿ ಹಾಜರಿದ್ದು ಬೇಡಿಕೆಗಳ ಬಗ್ಗೆ ಮೌಖಿಕವಾಗಿ ಶಾಸಕರಿಗೆ ಮನವಿ ಮಾಡಿಕೊಂಡರು.</p>.<p>ಸಾರಿಗೆ ನಿಯಂತ್ರಕ ಎಂ.ಬಿ.ಪೂಜಾರಿ, ಸಾರಿಗೆ ಇಲಾಖೆ ಎಇಇ ಮಲ್ಲಿಕಾರ್ಜುನ ಬಿರಾದಾರ, ನಗರ ಸಾರಿಗೆ ಘಟಕ ವ್ಯವಸ್ಥಾಪಕ ಎಂ.ಆರ್.ಲಮಾಣಿ, ಶ್ರೀಕಾಂತ ಮೆಟಗಾರ, ಶಿವಶರಣ ಹೊಸಮನಿ, ಅರವಿಂದ, ಗೌಡಪ್ಪಗೌಡ ಹಂದ್ರಾಳ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>