ಮೀಸಲಾತಿ ದೊರಕಿಸಿಕೊಳ್ಳುವ ಹಿನ್ನೆಲೆಯಲ್ಲಿ ವಿವಿಧ ರೀತಿಯಲ್ಲಿ ಹೋರಾಟ ರೂಪಿಸಲಾಗುವುದು. ಜನವರಿ 15 ರಿಂದ ಕಾಗಿನೆಲೆ ಸುಕ್ಷೇತ್ರದಿಂದ 15 ದಿನಗಳ ಕಾಲ ಬೆಂಗಳೂರಿಗೆ ಪಾದಯಾತ್ರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಈ ಹೋರಾಟ ಪಕ್ಷಬೇಧ ಮರೆತು ನಡೆಸುತ್ತಿರುವ ಕುರುಬ ಸಮುದಾಯ ಅತ್ಯಂತ ಪ್ರಮುಖ ಹೋರಾಟವಾಗಿದೆ. ಎಲ್ಲ ಕುರುಬ ಸಮುದಾಯದ ಜನರು ಒಗ್ಗಟ್ಟಿನಿಂದ ಹೋರಾಟದಲ್ಲಿ ಮುನ್ನುಗ್ಗಬೇಕು ಎಂದು ಸಿದ್ದು ಬುಳ್ಳಾ, ಪ್ರಕಾಶ ಹಿರೇಕುರುಬರ, ರವಿ ನಾಯ್ಕೋಡಿ, ದತ್ತಾತ್ರೇಯ ಯಡಗಿ, ಸಿದ್ದು ಕೆರಿಗೊಂಡ, ಬನ್ನೆಪ್ಪ ಜೋಗಿ ಮನವಿ ಮಾಡಿಕೊಂಡರು.